ಶ್ರೀ ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಶಿವಮೂರ್ತಿ ಸ್ವಾಮಿಯವರಿಗೆ ಶ್ರದ್ಧಾಂಜಲಿ

ಶ್ರೀ ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ  ಶಿವಮೂರ್ತಿ ಸ್ವಾಮಿಯವರಿಗೆ ಶ್ರದ್ಧಾಂಜಲಿ

ದಾವಣಗೆರೆ, ಅ. 11 – ಕಳೆದ ವಾರ ನಿಧನರಾದ ಬಾಡಾ ಕ್ರಾಸ್ ಶ್ರೀ ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಎ.ಹೆಚ್. ಶಿವಮೂರ್ತಿಸ್ವಾಮಿ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸುವ ಕಾರ್ಯಕ್ರಮವು  ಡಾ. ಪುಟ್ಟರಾಜ ಸೇವಾ ಸಮಿತಿ ಜಿಲ್ಲಾ ಘಟಕ ಮತ್ತು ಮಹಿಳಾ ಘಟಕದ ಆಶ್ರಯದಲ್ಲಿ ಶ್ರೀಗಂಧ ರೆಸಿಡೆನ್ಸಿ ಹಾಲ್‌ನಲ್ಲಿ ನಡೆಸಲಾಯಿತು. 

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಗದಗ – ದಾವಣಗೆರೆ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಶ್ರೀ ಕಲ್ಲಯಜ್ಜನವರು ಮಾತನಾಡಿ, ಎ.ಹೆಚ್. ಶಿವಮೂರ್ತಿಸ್ವಾಮಿ ಅವರ ಆದರ್ಶ ಜೀವನ ಹಾಗೂ ನಡೆದು ಬಂದ ದಾರಿಯನ್ನು ಮಾರ್ಮಿಕವಾಗಿ ವಿವರಿಸಿದರು. 

ಸಮಿತಿಯ ರಾಜ್ಯಾಧ್ಯಕ್ಷ ಚನ್ನವೀರಸ್ವಾಮಿ ಹಿರೇಮಠ, ರಾಜ್ಯ ಸಂಚಾಲಕ ಶಿವಬಸಯ್ಯ ಚರಂತಿಮಠ, ಜಿಲ್ಲಾ ಉಪಾಧ್ಯಕ್ಷ ರೇವಣಸಿದ್ದಪ್ಪ, ಜಿಲ್ಲಾ ಕಾರ್ಯದರ್ಶಿ ವೀರಶೈವ ಸೊಸೈಟಿಯ ಅಧ್ಯಕ್ಷ ಎ. ಎಸ್. ಮೃತ್ಯುಂಜಯ, ಪ್ರಚನಕಾರ ಮಹಾಂತೇಶ ಶಾಸ್ತ್ರಿ ಮತ್ತಿತರರು ಶಿವಮೂರ್ತಿಸ್ವಾಮಿ ಅವರ ಸೇವೆಯನ್ನು ಕೊಂಡಾಡಿದರು. 

ಶಿವಮೂರ್ತಿ ಸ್ವಾಮಿ ಅವರ ಪುತ್ರಿಯೂ ಆಗಿರುವ ಬಿಐಇಟಿ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಸುಗ್ಲಾದೇವಿ ಉಪಸ್ಥಿತರಿದ್ದರು. ಸಮಿತಿಯ ಜಿಲ್ಲಾ ಅಧ್ಯಕ್ಷ ಪಿ. ಬಿ. ವಿನಾಯಕ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಪತ್ರಕರ್ತ ಬಕ್ಕೇಶ್ ನಾಗನೂರು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ  ಸೌಮ್ಯ ಸತೀಶ್, ಉಪಾಧ್ಯಕ್ಷರಾದ  ವನಜಾ ಮಹಲಿಂಗಯ್ಯ, ಕಾರ್ಯದರ್ಶಿ ಮಮತಾ ನಾಗರಾಜ್,  ಪದಾಧಿಕಾರಿಗಳಾದ ಮಧುಮತಿ ಗಿರೀಶ್, ಪುಷ್ಪ ಎನ್‌ ಎಚ್‌.ಶಾಂತಾ ಶಿವಶಂಕರ್, ದಾಕ್ಷಾಯಣಿ, ಶಾನ್ವಿ, ರಾಜಶ್ರೀ ರಮೇಶ್, ಪುಷ್ಪಲತಾ, ಮಂಜುಳಾ, ಅನುಷಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!