ನಿಸರ್ಗ ಯೋಗ ಚಿಕಿತ್ಸಾ ಶಿಬಿರ ಉದ್ಘಾಟನೆ

ನಿಸರ್ಗ ಯೋಗ ಚಿಕಿತ್ಸಾ ಶಿಬಿರ ಉದ್ಘಾಟನೆ

ಹರಿಹರ, ಅ. 10 – ನಗರದ ಧನ್ವಂತರಿ ಪತಂಜಲಿ ಆರೋಗ್ಯ ಕೇಂದ್ರ, ಯಶಸ್ವಿ ಕಿರಣ ಸೇವಾ ಸಂಸ್ಥೆ, ಶ್ರೀಮತಿ ಗಿರಿಯಮ್ಮ ಆರ್. ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ವಿದ್ಯಾಲಯ ಮತ್ತು ಪದವಿ ಪೂರ್ವ ಕಾಲೇಜು, ಶ್ರೀ ಕಾಮಧೇನು ಕ್ರೀಡಾ ಮತ್ತು ಸಾಂಸ್ಕೃತಿಕ ಸಮುದಾಯ ಸೇವಾ ಸಂಘ  ಇವರುಗಳ ಸಹಯೋಗದೊಂದಿಗೆ ಗಿರಿಯಮ್ಮ ಕಾಲೇಜ್ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ನಿಸರ್ಗ ಯೋಗ ಚಿಕಿತ್ಸಾ ಶಿಬಿರವನ್ನು ಶಾಸಕ ಬಿ. ಪಿ ಹರೀಶ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಪೂರ್, ವೀರೇಶ್, ತುಂಗಭದ್ರಾ ಸೊಸೈಟಿ ಅಧ್ಯಕ್ಷ ಹಲಸಬಾಳು ಶಿವಾನಂದಪ್ಪ, ಯೋಗ ಉಪನ್ಯಾಸಕ ಜಯರಾಮ್, ನಾರಾಯಣ ಜೋಯಿಸರು, ನಿರಂಜನ, ಕರಿಬಸಪ್ಪ ಕಂಚಿಕೇರಿ, ಗಣಪತಿ ಮಾಳಂಜೆ, ವಿಜಯಕುಮಾರ್,  ಹರಿಶಂಕರ್ ಜೋಯಿಸರು, ಕಾರ್ತಿಕ್, ಶಶಿನಾಯ್ಕ್, ಇತರರು ಹಾಜರಿದ್ದರು. 

error: Content is protected !!