ಇಂದು 6ನೇ ಗ್ಯಾರಂಟಿಗೆ ಒತ್ತಾಯಿಸಿ ಜನಾಂದೋಲನ

ಇಂದು 6ನೇ ಗ್ಯಾರಂಟಿಗೆ ಒತ್ತಾಯಿಸಿ ಜನಾಂದೋಲನ

ದಾವಣಗೆರೆ,ಅ.6- ಚುನಾವಣೆ ಸಂದರ್ಭ ದಲ್ಲಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ್ದ ಆರನೇ ಗ್ಯಾರಂಟಿಯನ್ನು ಮರೆತಿದೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಹೇಳಿದರು.

ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕೆಂದು  ನಾಳೆ ದಿನಾಂಕ 7ರ ಶನಿವಾರ ಸರ್ಕಾರವನ್ನು ಒತ್ತಾಯಿಸುವ ಜನಾಂದೋ ಲನದ   ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಇಲ್ಲಿನ ಜಯದೇವ ಸರ್ಕಲ್ ಬಳಿ ಸೇರಿದ್ದ ಭಾರತ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಜನಾಗ್ರಹ ಜನಾಂದೋ ಲನ ಚಳವಳಿ  ಕುರಿತು ಮಾತನಾಡಿದ ಸಿಪಿಐ ಜಿಲ್ಲಾ ಖಜಾಂಚಿ ಆನಂದ್ ರಾಜ್, ರೈತರ ಮತ್ತು ಕಾರ್ಮಿಕರ ದುಡಿಯುವ ಜನರ ಮತಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ  ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಹಿಂದೆ ಬಿದ್ದಿದ್ದು, ಕೂಡಲೇ ಕೊಟ್ಟ ಭರವಸೆ ಈಡೇರಿಸಿ ಜನರ ನೈಜ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಹಕಾರ್ಯದರ್ಶಿ ಹೆಚ್. ಜಿ. ಉಮೇಶ್,  ತಾಲ್ಲೂಕು ಕಾರ್ಯದರ್ಶಿಗಳಾದ ಮಹಮ್ಮದ್ ಭಾಷಾ ಜಗಳೂರು, ಮಹಮ್ಮದ್ ರಫೀಕ್ ಚೆನ್ನಗಿರಿ, ಟಿ. ಎಚ್. ನಾಗರಾಜ್ ಹರಿಹರ, ಮುಖಂಡರುಗಳಾದ ವಿ. ಲಕ್ಷ್ಮಣ, ಎಚ್‌.ಎಸ್. ಚಂದ್ರು, ನಿಟುವಳ್ಳಿ ಬಸವ ರಾಜ, ಮಹೇಶ, ಸರೋಜ, ಅಜೀಜ್, ಶೇಖರ ನಾಯಕ, ಕುಮಾರ ನಾಯಕ, ಸಿದ್ದಲಿಂಗೇಶ್, ಜಯಪ್ಪ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.

error: Content is protected !!