ಬರಗಾಲ ಕಾಮಗಾರಿ ವಲಸೆ ಹೋಗದಂತೆ ಮನವಿ

ಬರಗಾಲ ಕಾಮಗಾರಿ ವಲಸೆ ಹೋಗದಂತೆ ಮನವಿ

ರಾಣೇಬೆನ್ನೂರು, ಅ.4- ಮಳೆ ಕೊರತೆಯಿಂದ ತಾಲ್ಲೂಕಿನಲ್ಲಿ ಬರಗಾಲ ಘೋಷಣೆ ಮಾಡಿದ್ದು ನರೇಗಾ ಯೋಜನೆಯಲ್ಲಿ ಎಲ್ಲ ಕಾರ್ಮಿಕರಿಗೂ ಕೆಲಸ ಕೊಡಲಾಗುತ್ತದೆ. ಕಾರಣ ಯಾರೂ ಕೆಲಸ ಹುಡುಕಿಕೊಂಡು ವಲಸೆ ಹೋಗಬಾರದು ಎಂದು ತಾಪಂ ಸಹಾಯಕ ನಿರ್ದೇಶಕ  ಪರಶುರಾಮ ಪೂಜಾರ ಹೇಳಿದರು. 

ಅವರು ಹನುಮಾಪೂರ ಗ್ರಾಮದ ಪ್ರತಿ ಮನೆಗೂ ತೆರಳಿ ಸರ್ಕಾರದ ಜನೋಪಯೋಗಿ ಕಾರ್ಯಕ್ರಮದ ಮಾಹಿತಿ ನೀಡುತ್ತಿದ್ದರು.

ರೈತರು ಹೊಲಗಳಲ್ಲಿ ಇಂಗುಗುಂಡಿ ಮಾಡಿಕೊಳ್ಳಲು ರೋಜಗಾರ್‌ ಯೋಜನೆ ಲಭ್ಯವಿದ್ದು ತೋಟಗಾರ ಬೆಳೆಗಳಾದ ವಿಳೆಯದೆಲೆ, ತೆಂಗು, ಬಾಳೆ, ಚಿಕ್ಕು, ಕರಬೇವು ಮುಂತಾದ ಬೆಳೆಗಳಿಗೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ನಿರ್ದೇಶಕ  ದಿಂಗಾಲೇಶ ಅಂಗೂರ ಹೇಳಿದರು. ಗ್ರಾಪಂ ಸದಸ್ಯೆ ನೀಲಮ್ಮ ಮಾದರ, ಗ್ರಾಪಂ ಕಾರ್ಯದರ್ಶಿ ಮೋಹನ್ ಜಾಡರ ಉಪಸ್ಥಿತರಿದ್ದರು.

error: Content is protected !!