ಸಿದ್ಧಗಂಗಾ ಸ್ಕೌಟ್ಸ್‌ ಗೈಡ್ಸ್‌ನಿಂದ ‘ಸ್ವಚ್ಛತೆಯೇ ಸೇವೆ’ ಅಭಿಯಾನ

ಸಿದ್ಧಗಂಗಾ ಸ್ಕೌಟ್ಸ್‌ ಗೈಡ್ಸ್‌ನಿಂದ ‘ಸ್ವಚ್ಛತೆಯೇ ಸೇವೆ’ ಅಭಿಯಾನ

ದಾವಣಗೆರೆ, ಅ.4- ಭಾರತ್‌ ಸ್ಕೌಟ್ಸ್‌ ಗೈಡ್ಸ್‌ನ ಸಿದ್ಧಗಂಗಾ ಸ್ಥಳೀಯ ಸಂಸ್ಥೆಯ 600 ಕ್ಕೂ ಹೆಚ್ಚು ಕಬ್ಸ್‌ ಬುಲ್‌ ಬುಲ್ಸ್‌ ಸ್ಕೌಟ್‌ ಗೈಡ್‌ ಮಕ್ಕಳು ಗಾಂಧಿ ಜಯಂತಿ ಅಂಗವಾಗಿ `ಸ್ವಚ್ಛತೆಯೇ ಸೇವೆ’ ಅಭಿಯಾನದಲ್ಲಿ ಪಾಲ್ಗೊಂಡರು. 

ಕಾರ್ಯದರ್ಶಿ ಎಂ. ಸಿ ಮಹೇಶ್‌, ಎಲ್.ಟಿ. ಶಶಿಕಲಾ, ಗೈಡ್ಸ್‌ ಎಡಿಸಿ ರೇಖಾರಾಣಿ ಹಾಗೂ ಸ್ಕೌಟ್ಸ್‌ ಗೈಡ್ಸ್‌ ಕ್ಯಾಪ್ಟನ್‌ಗಳ ನೇತೃತ್ವದಲ್ಲಿ ಮಕ್ಕಳು ಸಾಮೂಹಿಕ ಪ್ರಾರ್ಥನೆ ಮಾಡಿ ಸ್ವಚ್ಛ ಭಾರತ ಶಪಥ ಸ್ವೀಕರಿಸಿದರು.

ನಂತರ ಮಕ್ಕಳು ತಂಡ ತಂಡವಾಗಿ ಶಾಲೆಯ ಆಟದ ಮೈದಾನ, ಪಾರ್ಕ್‌ ಮತ್ತು ಸುತ್ತಲಿನ ಆವರಣವನ್ನು ಸ್ವಚ್ಛಗೊಳಿಸಿದರು. ದೈಹಿಕ ಶಿಕ್ಷಕರಾದ ರಘು, ಶ್ರೀನಿವಾಸ್‌, ದುಗ್ಗಪ್ಪ, ಆರೋಗ್ಯಮೇರಿ, ಸುನೀತಾ ಮಾರ್ಗದರ್ಶನ ಮಾಡಿದರು. ಇತರೆ ಮಕ್ಕಳು ಈ ಮಕ್ಕಳಿಗೆ ನೆರವು ನೀಡಿದರು. 

error: Content is protected !!