ಸರ್ ಎಂ.ವಿ. ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಸರ್ ಎಂ.ವಿ. ಕಾಲೇಜಿನ ವಿದ್ಯಾರ್ಥಿಗಳು  ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ದಾವಣಗೆರೆ, ಅ.5- ಸರ್ ಎಂ. ವಿ. ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ  ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪುರುಷರ ವಿಭಾಗದಲ್ಲಿ ನಿಹಾಲ್ ಮತ್ತು ತಂಡದವರು (ಹ್ಯಾಂಡ್‍ಬಾಲ್), ಕೌಶಿಕ್‌ ಮತ್ತು ತಂಡದವರು (ಬ್ಯಾಸ್ಕೆಟ್ ಬಾಲ್), ಅಮೋಘ್ ಮತ್ತು ತಂಡದವರು  (ಷಟಲ್‌ ಬ್ಯಾಡ್ಮಿಂಟನ್), ಪಿಯೂಷ್ ಜಾಧವ್ ಮತ್ತು ತಂಡದವರು (ಟೇಬಲ್ ಟೆನ್ನಿಸ್), ಮಲ್ಲನಗೌಡ ಮತ್ತು ತಂಡದವರು (ಥ್ರೋ ಬಾಲ್), ಆಕಾಶ್ ಪಿ. ಕುದುರೆ, ರಾಕೇಶ್ (ಜಂಪ್ ರೋಪ್), ರೋಹಿತ್ ಬಿ.ಎನ್., ಜಯದ್ವ ಕೆ. ಕಣಕುಪ್ಪಿ ಮತ್ತು ಫರ್ಹಾನ್ (ಸ್ವಿಮ್ಮಿಂಗ್) ಹಾಗೂ ಸಂಜಯ್ (ಚೆಸ್) ಅವರುಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಎಸ್.ಜೆ.ಶ್ರೀಧರ್, ನಿರ್ದೇಶಕರಾದ ಸೈಯದ್ ಷಂಷೀರ್ ಹಾಗೂ ಸಂಸ್ಥೆಯ ಎಲ್ಲಾ ನಿರ್ದೇಶಕರು ಮತ್ತು ಪ್ರಾಂಶುಪಾಲರಾದ ದೇವರಾಜ್ ಎಂ. ಸರಾಪದ, ರಾಘವೇಂದ್ರರಾವ್, ದೈಹಿಕ  ನಿರ್ದೇಶಕರಾದ ಕೊಟ್ರೇಶ್ ಕೆ.ಎನ್., ಜಿ. ನವೀನ್, ಬೋಧಕ-ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.

error: Content is protected !!