ದಾವಣಗೆರೆ, ಅ.5- ನಗರದ ಮಾಗಾನಹಳ್ಳಿ ರಸ್ತೆ, ಸುಲ್ತಾನ್ ಪ್ಯಾಲೇಸ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಕೂಲ್ ಗೇಮ್ ಕರಾಟೆ ಸ್ಪರ್ಧೆಯಲ್ಲಿ ಅನಿಲ್ ಆರ್ಚರಿ ಕೋಚ್ ಅವರ ವಿದ್ಯಾರ್ಥಿಗಳಾದ ಮಲೇಬೆನ್ನೂರು ಜಿಜೆಸಿ ಪ್ರೌಢಶಾಲಾ ವಿಭಾಗದ ಎಂಟನೇ ತರಗತಿ ವಿದ್ಯಾರ್ಥಿ ಭಾಸ್ಕರ್ ಪ್ರಥಮ ಸ್ಥಾನ ಗಳಿಸಿ ಬಂಗಾರದ ಪದಕ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿನಿ ವರ್ಷಿಣಿ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಪಡೆದಿರುತ್ತಾರೆ.
ಕುಂಬಳೂರಿನ ಬಸವ ಗುರುಕುಲ ಇಂಗ್ಲಿಷ್ ಮೀಡಿಯಂ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಸಂಜನಾ ದ್ವಿತೀಯ ಸ್ಥಾನವನ್ನು ಪಡೆದು ಬೆಳ್ಳಿ ಪದಕವನ್ನು ಹಾಗೂ ಕುಂಬಳೂರಿನ ಬಸವ ಗುರುಕುಲ ಕನ್ನಡ ಮೀಡಿಯಂನ ಎಂಟನೇ ತರಗತಿ ವಿದ್ಯಾರ್ಥಿ ಚೇತನ್ ತೃತೀಯ ಸ್ಥಾನವನ್ನು ಪಡೆದು ಕಂಚಿನ ಪದಕ ಪಡೆದು ವಿಜೇತರಾಗಿದ್ದಾರೆ. ತರಬೇತುದಾರ ಸಂತೋಷ ಡಿ., ಶಾಲೆಯ ಮುಖ್ಯೋಪಾಧ್ಯಾಯರು, ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.