ಕರ್ನಾಟಕ ಆರ್ಯವೈಶ್ಯ ಯುವಜನ ಸಭಾದ ಅಧ್ಯಕ್ಷ ಸುನೀಲ್‌ಗೆ ಸನ್ಮಾನ

ಕರ್ನಾಟಕ ಆರ್ಯವೈಶ್ಯ ಯುವಜನ ಸಭಾದ ಅಧ್ಯಕ್ಷ ಸುನೀಲ್‌ಗೆ ಸನ್ಮಾನ

ದಾವಣಗೆರೆ, ಅ.1- ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಎಸ್.ಸುನೀಲ್ ಅವರನ್ನು ಇಂದು ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ದೇವಸ್ಥಾನ ಸಂಘ ಹಾಗೂ ಆರ್ಯವೈಶ್ಯ ಎಲ್ಲಾ ಸಂಘ – ಸಂಸ್ಥೆಗಳಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ಆಜೀವ ಗೌರವಾಧ್ಯಕ್ಷ ಆರ್.ಜಿ.ನಾಗೇಂದ್ರ ಪ್ರಕಾಶ್, ಅಧ್ಯಕ್ಷ ಆರ್.ಎಲ್.ಪ್ರಭಾಕರ್, ಕಾರ್ಯಾಧ್ಯಕ್ಷ ಕಾಸಲ್ ಎಸ್.ಸತೀಶ್, ಕಾರ್ಯದರ್ಶಿ ರವೀಂದ್ರಗುಪ್ತ, ಸಹಕಾರ್ಯದರ್ಶಿ ಎ.ಎಸ್.ಸತ್ಯನಾರಾಯಣಸ್ವಾಮಿ, ಖಜಾಂಚಿ ಎಂ.ಕೆ.ನಾಗೇಂದ್ರ, ಬಿ.ಪಿ.ನಾಗಭೂಷಣ್, ಕನ್ನಿಕಾಪರಮೇಶ್ವರಿ ಕೋ-ಆಪ್. ಬ್ಯಾಂಕ್ ನ ಅಧ್ಯಕ್ಷ ಆರ್.ಜಿ.ಶ್ರೀನಿವಾಸ್ ಮೂರ್ತಿ, ಎಸ್.ಕೆ.ಪಿ.ವಿದ್ಯಾಪೀಠದ ಕಾರ್ಯದರ್ಶಿ ಕೆ.ಅನಂತರಾಮಶೆಟ್ಟಿ, ವಾಸವಿ‌ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಬಿ.ಸಿ.ವರಮಹಾಲಕ್ಷ್ಮಿ, ಪ್ರಗತಿ ಪಬ್ಲಿಕ್‌ ಟ್ರಸ್ಟ್ ನ ಕಾರ್ಯದರ್ಶಿ ಮಾಕಂ ನಾಗರಾಜ ಗುಪ್ತ, ಅಂಗ ಸಂಸ್ಥೆಗಳ ಎಲ್ಲಾ ಪದಾಧಿಕಾರಿಗಳು, ಜಿಗಳಿ‌ ವಾಸವಿ ಯುವಜನ ಸಂಘದ ಪದಾಧಿಕಾರಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.

error: Content is protected !!