ಹರಿಹರದಲ್ಲಿಂದು ವಿಶ್ವ ಛಾಯಾಗ್ರಹಣ ದಿನಾಚರಣೆ

ಹರಿಹರದಲ್ಲಿಂದು ವಿಶ್ವ ಛಾಯಾಗ್ರಹಣ ದಿನಾಚರಣೆ

ಹರಿಹರ, ಸೆ. 29 – ನಗರದಲ್ಲಿ ಹರಿಹರ ತಾಲ್ಲೂಕು ಛಾಯಾಗ್ರಹಕರ ಸಂಘದ ವತಿಯಿಂದ ನಾಳೆ ದಿನಾಂಕ 30 ರ ಶನಿವಾರ ಬೆಳಗ್ಗೆ 12 ಗಂಟೆಗೆ ಎಸ್.ಎಸ್.ಕೆ. ಮಿನಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸಂತೋಷ್ ಎನ್. ಖಿರೋಜಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಮಾರಂಭವನ್ನು ಶಾಸಕ ಬಿ.ಪಿ. ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಹಶಿಲ್ದಾರ್ ಪೃಥ್ವಿ ಸಾನಿಕಂ, ಪಿಎಸ್ಐ ದೇವಾನಂದ್, ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ವಿಜಯ್ ಜಾಧವ್, ತಾಲ್ಲೂಕು ಛಾಯಾ ಗ್ರಾಹಕರ ಸಂಘದ ಗೌರವಾಧ್ಯಕ್ಷ ಅಂಬಾಸಾ ಮಹೆರ್ವಾಡೆ, ಗೌರವ ಸಲಹೆಗಾರ ಜಿ.ಪಿ. ಬಾಬು ಇತರರು ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ. 

ಸಮಾರಂಭದಲ್ಲಿ ಮೈಸೂರಿನ ಬಾಬು ಜಿ.ಎಸ್. ಇವರಿಂದ ಪೋಟೋ ಶಾಪ್  ಲೈಟ್ ರೂಂ ಬಗ್ಗೆ ವಿಶೇಷ ಕಾರ್ಯಾಗಾರ ಏರ್ಪಡಿಸಲಾಗಿದೆ. 

ಈ ಸಂದರ್ಭದಲ್ಲಿ ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ವಿಜಯ ಜಾಧವ್,  ತಾಲ್ಲೂಕು ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಅಂಬಾಸಾ ಮೆಹರ್ವಾಡೆ, ಜಿ.ಪಿ. ಬಾಬು, ಜಿಲ್ಲಾ ಕಾರ್ಯದರ್ಶಿ ಕೆ.ಸಿ. ರಾಜು, ಉಪಾಧ್ಯಕ್ಷ ಸತೀಶ್ ಆಚಾರ್‌, ಸಚ್ಚಿನ್ ಠಾಕೂರ್, ಪ್ರಧಾನ ಕಾರ್ಯದರ್ಶಿ ಮಧುಸೂದನ್ ಎಸ್. ಆರ್., ಸಹ ಕಾರ್ಯದರ್ಶಿ ಪ್ರಕಾಶ್, ಬಸವರಾಜ್ ತಳವಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!