ಮಲೇಬೆನ್ನೂರು, ಸೆ. 29- ಪಟ್ಟಣದಲ್ಲಿ ಶುಕ್ರವಾರ ಈದ್ ಮಿಲಾದ್ ಹಬ್ಬದ ಬೃಹತ್ ಮೆರವಣಿಗೆಯನ್ನು ಮುಸ್ಲಿಂ ಬಾಂಧವರು ಸಡಗರ-ಸಂಭ್ರಮದಿಂದ ನಡೆಸಿದರು.
ಗುರುವಾರ ಪಟ್ಟಣದಲ್ಲಿ ವಾರದ ಸಂತೆ ಇದ್ದ ಪ್ರಯುಕ್ತ ಮೆರವಣಿಗೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು.
ಶುಕ್ರವಾರ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು, ನಂತರ ಸೈಯದ್ ಹಬೀಬುಲ್ಲಾ ಷಾ ದರ್ಗಾದಲ್ಲಿ ಚಾದರ ಹೊದಿಸಿ ಪ್ರಾರ್ಥನೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆ ಉದ್ದಕ್ಕೂ ಯುವಕರು, ಮಕ್ಕಳು ಹಸಿರು ಬಣ್ಣದ ಜಂಡಾ ಹಿಡಿದು ಸಂಭ್ರಮಿಸಿದರು. ಅಲ್ಲಲ್ಲಿ ತಂಪು ಪಾನೀಯ, ಷರಬತ್ತು ವಿತರಿಸಲಾಯಿತು.
ಮುಖ್ಯ ರಸ್ತೆಯಲ್ಲಿ ಸಾಗಿದ ಮೆರವಣಿಗೆಯು ಪೊಲೀಸ್ ಠಾಣೆ ರಸ್ತೆ, ಸಂತೆ ರಸ್ತೆ, ನಂದಿಗುಡಿ ರಸ್ತೆ ಮೂಲಕ ಶಾದಿ ಮಹಲ್ ತಲುಪಿ ಅಲ್ಲಿ ಅಂತ್ಯಗೊಂಡಿತು.
ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಇನ್ಸೈಟ್ ಸಂಸ್ಥೆಯ ಜಿ.ಬಿ. ವಿನಯ್ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಪುರಸಭೆ ಸದಸ್ಯರಾದ ಕೆ.ಜಿ. ಲೋಕೇಶ್, ಟಿ. ಹನುಮಂತಪ್ಪ, ಬಿ. ಸುರೇಶ, ಕೆ.ಪಿ. ಗಂಗಾಧರ್, ಭೋವಿಕುಮಾರ್, ಪಿ.ಹೆಚ್. ಶಿವಕುಮಾರ್ ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.
ಜುಮ್ಮ ಮಸೀದಿ ಆಡಳಿತಾಧಿಕಾರಿ ಡಾ. ನಿಸಾರ್, ಉಸುರು ಕಮಿಟಿ ಅಧ್ಯಕ್ಷ ಎಂ.ಬಿ. ಖುರ್ಬಾನ್ ಅಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಮುಖಂಡರಾದ ಎಂ.ಬಿ. ರೋಷನ್, ಸೈಯದ್ ಜಾಕೀರ್, ಎಂ.ಬಿ. ಗುಲ್ಜಾರ್, ಸಿ. ಅಬ್ದುಲ್ ಹಾದಿ, ಎಂ.ಬಿ. ಫೈಜು, ಬಿ. ಸೈಫುಲ್ಲಾ, ಬಿ. ರಫೀಕ್, ಪುರಸಭೆ ಸದಸ್ಯರಾದ ಖಲೀಲ್, ನಯಾಜ್, ಸಾಬೀರ್ ಅಲಿ, ಷಾ ಅಬ್ರಾರ್, ಶಬ್ಬೀರ್ ಖಾನ್, ದಾದಾಪೀರ್, ಯುಸೂಫ್, ಅನ್ವರ್ ಭಾಷಾ, ಎಂ.ಬಿ. ರುಸ್ತುಂ, ಜಮೀರ್ ಭಾಷಾ, ಮಾಜಿ ಸದಸ್ಯ ಎ. ಆರೀಫ್ ಅಲಿ, ಚಮನ್ ಷಾ ಸೇರಿದಂತೆ ಇತರರು ಭಾಗವಹಿಸಿದ್ದರು.
ಸಿಪಿಐ ಸುರೇಶ್ ಸಗರಿ ಮತ್ತು ಪಿಎಸ್ಐ ಪ್ರಭು ಕೆಳಗಿನಮನಿ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.