ದಾವಣಗೆರೆ, ಸೆ. 28- ಕಾವೇರಿ ನದಿ ನೀರು ವಿವಾದದ ಹಿನ್ನೆಲೆಯಲ್ಲಿ ಕರೆ ಕೊಟ್ಟಿರುವ ನಾಳಿನ ಕರ್ನಾಟಕ ಬಂದ್ಗೆ ಬೆಂಬಲಿಸುವಂತೆ ಕನ್ನಡ ಪರ ಸಂಘ ಟನೆಗಳ ಒಕ್ಕೂಟದ ಪದಾಧಿ ಕಾರಿಗಳು ಗುಲಾಬಿ ಹೂ ನೀಡುವ ಮೂಲಕ ಮನವಿ ಮಾಡಿದರು. ಒಕ್ಕೂಟದ ಪದಾಧಿಕಾರಿ ಗಳಾದ ಶಿವರತನ್, ಎಸ್.ಜಿ. ಸೋಮಶೇ ಖರ್, ಶಮಂತ್ ಕುಮಾರ್ ನೇತೃತ್ವದಲ್ಲಿ ವರ್ತಕರಿಗೆ, ಅಂಗಡಿ ಮಾಲೀಕ ರಿಗೆ ಗುಲಾಬಿ ಹೂ ನೀಡಿ ಬಂದ್ಗೆ ಬೆಂಬಲಿಸುವಂತೆ ಕೋರಿದರು.
July 24, 2024