ಹರಪನಹಳ್ಳಿ, ಸೆ. 28- ಪಟ್ಟಣದಲ್ಲಿ ಮುಸ್ಲಿಂ ಬಾಂಧವರು ಅತ್ಯಂತ ಸಡಗರ, ಸಂಭ್ರಮದಿಂದ ಈದ್ ಮಿಲಾದ್ ಆಚರಣೆ ನಡೆಸಿದರು. ಹಳೇ ಬಸ್ ನಿಲ್ದಾಣದಿಂದ ಭವ್ಯ ಮೆರವಣಿಗೆ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಪಟ್ಟಣದ ಹಡಗಲಿ ರಸ್ತೆಯ ದರ್ಗಾದಲ್ಲಿ ಕೊನೆಗೊಂಡಿತು.
ಈ ವೇಳೆ ಅಂಜುಮನ್ ಅಧ್ಯಕ್ಷ ಮುಜಬರ್ ರಹಿಮಾನ್, ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ಖಾಜಿ ಮುಷ್ತಾಕ್ ಅಹ್ಮದ್ ರಜ್ವಿ, ಮೌಲಾನಾ ಗುಲಾಮ್ ರಬ್ಬಾನಿ ರಜ್ವಿ, ಗುಲಾಂ ಗೌಸ್, ಮೌಲಾನಾ ಮುಕ್ತಾರ್ ಆಲಮ್ ಮಿಸ್ಟ, ಮೌಲಾನಾ ಹೈದರ್ ಅಲಿ, ರಜ್ವಿ, ಮೌಲಾನಾ ಇಮ್ತಿಯಾಜ್ ಖಾನ್ ನಿಜಾಮಿ, ಹಾಪೀಜ್ ಸಯೀದ್ ರಜಾ ರಜ್ವಿ, ಹಾಫೀಜ್ ಸಯ್ಯದ್ ಅಲ್ತಾಫ್ ರಜ್ವಿ, ಜನಾಬ್ ಖಾಜೀ ಜಹೀರ್ ಭಾಷಾ ರಜ್ಜಿ, ಹಾಪೀಜ್ ಎಹೆತೆ ಶಾಮುದ್ದೀನ್ ರಜ್ವಿ, ಅಂಜುಮನ್ ಸಂಸ್ಥೆ ಕಾರ್ಯದರ್ಶಿ ಸಿ. ಚಮನ್ ಸಾಬ್, ಅಂಜುಮಾನ್ ಮಾಜಿ ಅಧ್ಯಕ್ಷ ಸಿ. ಜಾವೀದ್, ಪುರಸಭೆ ಸದಸ್ಯ ಜಾಕೀರ್ ಸರ್ಖಾವಸ್, ವಕೀಲರುಗಳಾದ ಮುಜೀಬ್, ಸಿರಾಜ್, ಮುತವಲ್ಲಿಗಳಾದ ಎ. ಅಲ್ಲಾಭಕ್ಷಿ, ಜಲಾಲಿ ಹುಸ್ಮಾನ್ ಸಾಬ್, ಮುಖಂಡರುಗಳಾದ ಎನ್. ಮಜೀದ್, ಹಾಜಿ ಷಮ್ನಾ, ಇರ್ಫಾನ್ ಅಹ್ಮದ್ ಸೈಯದ್ ಖಲೀಲ್ ಭಾಷಾ, ಬಿ. ಮಹಬೂಬ್ ಸಾಬ್ ಇತರರು ಉಪಸ್ಥಿತರಿದ್ದರು.