ಕರಾಟೆ : ವಿದ್ಯಾರ್ಥಿಗಳಿಗೆ ಬಹುಮಾನ

ಕರಾಟೆ : ವಿದ್ಯಾರ್ಥಿಗಳಿಗೆ ಬಹುಮಾನ

ದಾವಣಗೆರೆ, ಸೆ.27- ಚಿತ್ರದುರ್ಗದ ಚೈತನ್ಯ ಪಿ.ಯು. ಕಾಲೇಜು ಹಾಗೂ ನಿಹಾನ್ ಶೋಟೋಕಾನ್ ಕರಾಟೆ ಸಂಸ್ಥೆಯ ಸಹಯೋಗದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜಿಲ್ಲೆಯ ನಿಹಾನ್ ಶೋಟೋಕಾನ್ ಕರಾಟೆ ಅಸೋಷಿಯೇಷನ್‌ನ ವಿದ್ಯಾರ್ಥಿಗಳಿಗೆ ಬಹುಮಾನ ಲಭಿಸಿದೆ.

ಎಂ. ವರ್ಷ ಕುಯಿಟಿ ವಿಭಾಗದಲ್ಲಿ ಪ್ರಥಮ, ಕಟಾ ವಿಭಾಗದಲ್ಲಿ ದ್ವಿತೀಯ, ಆರ್. ಆದಿತ್ಯ ಕಟಾ ವಿಭಾಗದಲ್ಲಿ ಪ್ರಥಮ, ಕುಯಿಟಿ ದ್ವಿತೀಯ,  ಆರಾಧ್ಯ ಕುಯಿಟಿ ವಿಭಾಗದಲ್ಲಿ ದ್ವಿತೀಯ, ಕಟಾ ವಿಭಾಗದಲ್ಲಿ ತೃತೀಯ ಹಾಗೂ ಗಣೇಶ ಬಿ. ಬನಕಂಡಿ ಕುಯಿಟಿ ವಿಭಾಗದಲ್ಲಿ ಪ್ರಥಮ ಬಹುಮಾನ ಗಳಿಸಿ, ರಾಜ್ಯಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

error: Content is protected !!