ದಾವಣಗೆರೆ, ಸೆ. 26 – ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಪುನೀತ್ ರಾಜಕುಮಾರ್ ಸ್ಮರಣಾರ್ಥ ನಡೆದ ರಾಷ್ಟ್ರಮಟ್ಟದ 18ನೇ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ಶಿಪ್-2023ರಲ್ಲಿ ದಾವಣಗೆರೆ ಇಂಡಿಯನ್ ಮಾರ್ಷಲ್ ಆರ್ಟ್ಸ್ ಅಂಡ್ ಸೆಲ್ಫ್ ಡಿಫೆನ್ಸ್ ಆರ್ಗನೈಸೇಷನ್ ಶಾಲೆಯ ಕರಾಟೆ ಪಟುಗಳು ಭಾಗವಹಿಸಿ ಬಹುಮಾನ ಪಡೆದಿದ್ದಾರೆ.
ಗಣೇಶ, ಸೃಜನ್, ನಮ್ರತಾ, ಕ್ರಾಂತಿ, ಬಿ. ನವೀನ್, ಪ್ರಥಮ ಬಹುಮಾನ ಪಡೆದಿದ್ದು, ಶಾರದಾದೇವಿ, ರಾಕೇಶ್, ರಾಘವಿ, ಸಾನ್ವಿ, ಚಿನ್ಮಯ್, ಇಂಪನ, ಯಶಸ್, ದರ್ಶನ್, ರಾಹುಲ್, ಪ್ರಮೋದ್ ದ್ವಿತಿಯ ಹಾಗೂ ತೃತೀಯ ಸ್ಥಾನವನ್ನು ಅರಸು ಪ್ರದೀಪ್, ವರ್ಷನ್ ಪಡೆದಿದ್ದಾರೆ ಎಂದು ಶಾಲೆಯ ಅಧ್ಯಕ್ಷ ಸನ್ಶೈಯ್ ನಜೀರ್ ತಿಳಿಸಿದ್ದಾರೆ.