ದಾವಣಗೆರೆ, ಸೆ. 25- ನಗರದ ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಬರವಣಿಗೆ ಸುಧಾರಿಸಲು, ಸುಂದರ ಅಕ್ಷರಗಳ ಬರವಣಿಗೆಯನ್ನು ತರಬೇತಿಗೊಳಿಸಲು ಕ್ಯಾಲಿಗ್ರಫಿ ಬರವಣಿಗೆಯ ವಿಶೇಷ ತರಗತಿಗಳು ನಡೆಯುತ್ತಿದ್ದು, ಈಚೆಗೆ ಶಾಲಾ ಆವರಣದಲ್ಲಿ ಕ್ಯಾಲಿಗ್ರಫಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಕ್ಯಾಲಿಗ್ರಫಿ ಶಿಕ್ಷಕ ಬಿ.ಶಂಕರ್ ಅವರಿಂದ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ಸೈಕಲ್ ವಿತರಣೆ ಮಾಡಲಾಯಿತು. ಈ ರೀತಿ ಬರವಣಿಗೆಗಾಗಿ ಇಂತಹ ಉತ್ತಮ ಬಹುಮಾನವನ್ನು ವಿತರಣೆ ಮಾಡಿದ ಮೊದಲ ಶಿಕ್ಷಕರಿವರಾಗಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಸಯ್ಯದ್ ಆರಿಫ್ ಆರ್. ಹಾಗೂ ಶ್ರೀಮತಿ ಪ್ರೀತಾ ಟಿ. ರೈರವರು, ಉಪಪ್ರಾಂಶುಪಾಲರಾದ ಶ್ರೀಮತಿ ನೇತ್ರಾವತಿ, ಶಿಕ್ಷಕ, ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.