ದಾವಣಗೆರೆ, ಸೆ. 25- ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಪುತ್ರ ಚಿ|| ಸಮರ್ಥ್ ಅವರು ನಗರದ ಶ್ರೀ ಮೌನೇಶ್ವರಿ ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಶಾಲೆಯ ವಿದ್ಯಾರ್ಥಿಗಳಿಗೆ ಹಣ್ಣುಗಳನ್ನು ವಿತರಿಸಿದರು. ಶ್ರೀ ವಿನಾಯಕ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಹೆಚ್.ವಿ ಗೋಪಾಲಪ್ಪ ಹಾಜರಿದ್ದು, ಸಚಿವರಿಗೆ ಜನ್ಮ ದಿನದ ಶುಭಾಶಯ ಕೋರಿದರು. ಕಾಂಗ್ರೆಸ್ ಮುಖಂಡರು ಗಳಾದ ಆರೀಫ್ ಖಾನ್, ಮಹಮದ್ ಸಾಧಿಕ್, ಅಬ್ದುಲ್ ಜಬ್ಬಾರ್, ಬಶೀರ್ ಖಾನ್, ಸುಹೇಲ್, ಸೊಹೇಬ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
July 24, 2024