ಸುಂದರ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಬೇಕು

ಸುಂದರ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಬೇಕು

ಭದ್ರಾ ಕಾಲೇಜ್‌ನ  ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ವೆಂಕಟೇಶ್ ಬಾಬು

ದಾವಣಗೆರೆ, ಸೆ.24- ಸಮಾಜದಲ್ಲಿ ಗೌರವಯುತವಾಗಿ ಬಾಳಲು,  ಸುಂದರ ಜೀವನ ರೂಪಿಸಿಕೊಳ್ಳಲು, ತಂದೆ-ತಾಯಿಗಳ ಆಸೆಗಳನ್ನು  ಈಡೇರಿಸಲು ಮತ್ತು ಭವಿಷ್ಯಕ್ಕಾಗಿ ಕಷ್ಟ ಪಟ್ಟಾದರೂ ಸರಿ, ಇಷ್ಟ ಪಟ್ಟಾದರೂ ಸರಿ ನೀವು ಓದಲೇಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ಪ್ರಾಧ್ಯಾಪಕ ವೆಂಕಟೇಶ್ ಬಾಬು ಹೇಳಿದರು.

ನಗರದ ಭದ್ರಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಓರಿಯೆಂಟೇಷನ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ  ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನ ಬಂಗಾರದಂತಹ ಜೀವನ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿಯೊಂದಿಗೆ ಸತತ ಪ್ರಯತ್ನ ಪಟ್ಟು ಓದಿದರೆ ತಮ್ಮ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಅಂಬೇಡ್ಕರ್, ವಿಶ್ವೇಶ್ವರಯ್ಯ, ವಿವೇಕಾನಂದರು, ಅಬ್ದುಲ್ ಕಲಾಂ ಅವರು ಓದಿನಿಂದ ಜ್ಞಾನ ಪಡೆದು ಇಂದಿಗೂ ನಮ್ಮೊಂದಿಗೆ ಜೀವಂತವಾಗಿರುವುದನ್ನು ನಾವು ನೋಡುತ್ತೇವೆ. ಹಾಗೆಯೇ ಪ್ರತಿಯೊಬ್ಬರು ಓದುವ ಮೂಲಕ ಜ್ಞಾನ ಗಳಿಸಿಕೊಂಡು ಸಮಾಜದಲ್ಲಿ  ಗೌರವಯುತವಾಗಿ ಬಾಳಬೇಕು ಎಂದು ಹೇಳಿದರು.

ಜಗತ್ತು ಪ್ರತಿದಿನ ಬದಲಾಗುತ್ತಾ ಹೋಗುತ್ತದೆ. ಬದಲಾಗುವ ಜಗತ್ತಿನಲ್ಲಿ ನಾವು ಕೂಡ ಬದಲಾಗಬೇಕು. ತಾಂತ್ರಿಕವಾಗಿ ಕೌಶಲ್ಯಭರಿತರಾಗಿ ವಿದ್ಯಾರ್ಥಿಗಳು ಪದವಿಯೊಂದಿಗೆ ಬದಲಾದಾಗ ಉದ್ಯೋಗ ಮಾರುಕಟ್ಟೆಯಲ್ಲಿ ಆಕರ್ಷಿತರಾಗಿ ಉತ್ತಮ ಉದ್ಯೋಗ ದೊರಕುತ್ತದೆ. ಇದರಿಂದ ಉತ್ತಮರಾಗಿ ಬಾಳಲು ಸಾಧ್ಯ ಹೇಳಿದರು.

ಕಾರ್ಯಕ್ರಮದಲ್ಲಿ  ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ದೇವೇಂದ್ರಪ್ಪ ಹಾಗೂ ಪೂರ್ಣಿಮಾ ಹಾಗೂ ಇತರರು ಭಾಗವಹಿಸಿದ್ದರು. ಅಧ್ಯಕ್ಷತೆ ಯನ್ನು ಪ್ರಾಂಶುಪಾಲ  ಮುರುಗೇಶ್ ವಹಿಸಿದ್ದರು.

error: Content is protected !!