ಶ್ರೀ ಶಾರದಾಂಬ ದೇವಸ್ಥಾನಕ್ಕೆ ಹಾರನಹಳ್ಳಿ ಅಶೋಕ್ ಭೇಟಿ

ಶ್ರೀ ಶಾರದಾಂಬ ದೇವಸ್ಥಾನಕ್ಕೆ ಹಾರನಹಳ್ಳಿ ಅಶೋಕ್  ಭೇಟಿ

ದಾವಣಗೆರೆ, ಸೆ.24- ಕರ್ನಾಟಕ ರಾಜ್ಯ ಹೈಕೋರ್ಟಿನ ವಕೀಲರು,  ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಹಾರನಹಳ್ಳಿ ಅಶೋಕ್ ಅವರು ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಶಾರದಾಂಬ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಅವರನ್ನು ಶೀ ಶಂಕರ ಸೇವಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಶಂಕರ ಸೇವಾ ಸಂಘದ ಅಧ್ಯಕ್ಷ ಡಾ. ಬಿ.ಟಿ ಅಚ್ಯುತ,  ಕಾರ್ಯದರ್ಶಿ ಶ್ರೀನಿವಾಸ್ ಜೋಶಿ, ಡಾ. ಶಶಿಕಾಂತ್,  ವಿನಾಯಕ ಜೋಶಿ, ನಿರಂಜನ್,  ಟಿ.ವಿ. ಸುಬ್ರಹ್ಮಣ್ಯ, ಬಾಲಕೃಷ್ಣ ವೈದ್ಯ, ರಮೇಶ್ ಪಾಟೀಲ್,  ಗಿರೀಶ್ ನಾಡಿಗ್ ಹಾಗೂ ಬ್ರಾಹ್ಮಣ ಸಮಾಜದ ಸದಸ್ಯರುಗಳು ಹಾಜರಿದ್ದರು.

error: Content is protected !!