ಕೊಕ್ಕನೂರು ಶಾಲೆ ವಿದ್ಯಾರ್ಥಿ ಕಾರ್ತಿಕ್‌ ರಾಜ್ಯ ಮಟ್ಟಕ್ಕೆ ಆಯ್ಕೆ

ಕೊಕ್ಕನೂರು ಶಾಲೆ ವಿದ್ಯಾರ್ಥಿ  ಕಾರ್ತಿಕ್‌ ರಾಜ್ಯ ಮಟ್ಟಕ್ಕೆ ಆಯ್ಕೆ

ಮಲೇಬೆ ನ್ನೂರು, ಸೆ.22- ಕೊಕ್ಕನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಎ.ಸಿ. ಕಾರ್ತಿಕ್‌ ಇವನು ದಾವಣಗೆರೆಯ ಸಿದ್ಧಗಂಗಾ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ವಿಜ್ಞಾನ ಶಿಕ್ಷಕ ನೂಲಗೇರಿ ಅವರು ಕಾರ್ತಿಕ್‌ಗೆ ಮಾರ್ಗದರ್ಶನ ನೀಡಿದ್ದರು. ಇದೇ ಶಾಲೆಯ ವಿದ್ಯಾರ್ಥಿಳಾದ ಟಿ. ಸುರೇಖಾ ಮತ್ತು ಡಿ. ಮಹಾಂತೇಶ್‌ ಇವರು ಹರಿಹರದಲ್ಲಿ ಇತ್ತೀಚೆಗೆ ಜರುಗಿದ ತಾ. ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಗಳಿಸಿದ್ದರು.

error: Content is protected !!