ತರಳಬಾಳು ಶ್ರೀ ಶ್ರದ್ದಾಂಜಲಿ ಕಾರ್ಯಕ್ರಮಕ್ಕೆ ಧಾನ್ಯ ಸಮರ್ಪಣೆ

ತರಳಬಾಳು ಶ್ರೀ ಶ್ರದ್ದಾಂಜಲಿ ಕಾರ್ಯಕ್ರಮಕ್ಕೆ ಧಾನ್ಯ ಸಮರ್ಪಣೆ

ದಾವಣಗೆರೆ, ಸೆ. 22- ತರಳಬಾಳು ಜಗದ್ಗುರು ಲಿಂ. ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 31 ನೇ ಶ್ರದ್ಧಾಂಜಲಿ ಕಾರ್ಯಕ್ರಮದ ದಾಸೋಹಕ್ಕೆ ತಾಲ್ಲೂಕಿನ (ಪಾಲಿಕೆ ವ್ಯಾಪ್ತಿಯ 21 ನೇ ವಾರ್ಡ್) ಬಸಾಪುರ ಗ್ರಾಮದ ಭಕ್ತರಿಂದ ಗೋಧಿ ನುಚ್ಚು, ಹೆಸರುಬೇಳೆ, ಕಡ್ಲೆಕಾಳು ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ತರಳಬಾಳು ಶಾಲಾ ಸ್ಥಳೀಯ ಸಲಹಾ ಸಮಿತಿಯ ಕಾರ್ಯದರ್ಶಿ ಎಸ್. ಸುರೇಂದ್ರಪ್ಪ, ಉಪಾಧ್ಯಕ್ಷರಾದ ಬಿ.ಟಿ. ಮರುಳಸಿದ್ಧಪ್ಪ, ತರಳಬಾಳು ಗ್ರಾಮ ಸಮಿತಿಯ ಅಧ್ಯಕ್ಷ ಟಿ. ರೇವಣಸಿದ್ಧಪ್ಪ, ಕಾರ್ಯದರ್ಶಿ ಪ್ರದೀಪ್ ಕುಮಾರ್, ಬಾತಿ ವಿಶ್ವನಾಥ್, ಸಿ. ವಿಜಯಕುಮಾರ್, ಬೇತೂರು ಜಗದೀಶ್‌, ಬಣಕಾರ ಬಸವರಾಜ್, ಬಿ.ಎಸ್. ಶಿವಮೂರ್ತಿ, ಐಗೂರು ರಾಜು, ಬಿ.ಎಸ್. ಸಿದ್ಧೇಶ್, ಟಿ.ಎಂ. ಯೋಗೇಶ್, ಬಿ.  ಶಿವಮೂರ್ತಿ, ಕೆ.ಬಿ. ವೀರೇಶ್, ಕೆ.ಪಿ. ಸುನೀಲ್ ಕುಮಾರ್, ಕೆ.ಬಿ. ಕರಿಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!