ಮಲೇಬೆನ್ನೂರು, ಸೆ.12- ಹೊಳೆಸಿರಿಗೆರೆ ಗ್ರಾಮದ ಅಂಗನವಾಡಿ `ಎ’ ಕೇಂದ್ರದಲ್ಲಿ ತೀವ್ರ ತರವಾದ ಮಿಷನ್ ಇಂದ್ರಧನುಷ್ 5.0 ಅಭಿಯಾನ ಕಾರ್ಯಕ್ರಮವನ್ನು ಸೋಮವಾರ ಏರ್ಪಡಿಸಲಾಗಿತ್ತು.
ಈ ವೇಳೆ ಮಕ್ಕಳಿಗೆ ಲಸಿಕೆ ಹಾಕಲಾಯಿತು. ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಣಾಧಿಕಾರಿ ಆಶಾರಾಣಿ, ಆಶಾ ಕಾರ್ಯಕರ್ತರಾದ ಮಾಲಾಶ್ರೀ, ನೀಲಾಂಬಿಕೆ, ಕಸ್ತೂರಿಬಾಯಿ, ಪುಷ್ಪಾವತಿ, ಶಶಿಕಲಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಮಂಜಮ್ಮ ಮತ್ತು ಮಕ್ಕಳು, ತಾಯಂದಿರು, ಗರ್ಭಿಣಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.