ಕರಾಮಸಾಪದಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

ಕರಾಮಸಾಪದಿಂದ  ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

ದಾವಣಗೆರೆ, ಸೆ. 11 – ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ದಾವಣಗೆರೆ ದಕ್ಷಿಣ ವಿಭಾಗದಿಂದ 2023-24ನೇ ಸಾಲಿಗೆ ದಾವಣಗೆರೆ ತಾಲ್ಲೂಕಿನಿಂದ ಇಬ್ಬರು ಶಿಕ್ಷಕರನ್ನು ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಾಥಮಿಕ ಶಾಲಾ ವಿಭಾಗದಿಂದ ಎಲ್ಲಮ್ಮ ನಗರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಎಸ್. ಮಂಜುಳಾ ದಾವಣಗೆರೆ ದಕ್ಷಿಣ ವಲಯ ಹಾಗೂ ಪ್ರೌಢಶಾಲಾ ವಿಭಾಗದಿಂದ  ಶ್ರೀಕಾಂತ್ ಹೆಚ್. ಬಸವಾಪುರ ಇವರನ್ನು ದಾವಣಗೆರೆ ದಕ್ಷಿಣ ವಲಯ ಶಿಕ್ಷಕರ ದಿನಾಚರಣೆಯ ದಿನದಂದು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕ.ರಾ.ಮ.ಸಾ.ಪ. ಅಧ್ಯಕ್ಷ ಎ.ಜೆ. ರವಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪುಷ್ಪಲತಾ, ಉದ್ಯಮಿ ಶಿವನಳ್ಳಿ ರಮೇಶ್, ಭಾರತ ಸೇವಾದಳದ ಅಧ್ಯಕ್ಷ ಚನ್ನಪ್ಪ ಪಲ್ಲಾಗಟ್ಟೆ, ಪತ್ರಕರ್ತರಾದ ನಾಗರಾಜ್ ಬಡದಾಳ್, ಶ್ರೀಮತಿ ತೇಜಸ್ವಿನಿ ಪ್ರಕಾಶ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ರೋಟರಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಹೆಚ್. ಆಂಜನೇಯ ಮೂರ್ತಿ ಉಪಸ್ಥಿತರಿದ್ದರು.

error: Content is protected !!