ದಾವಣಗೆರೆ, ಸೆ. 5- ಎಲೆಬೇತೂರು ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2022- 23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಓಂ ಶಾಂತಿ ಭವನದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿ.ಎಸ್.ರಾಜಶೇಖರಪ್ಪ ಮಾತನಾಡಿ, ಸದಸ್ಯರು ಸಂಘದಲ್ಲಿ ಹೆಚ್ಚಿನದಾಗಿ ಠೇವಣೆ ಇಟ್ಟರೆ, ಹೆಚ್ಚಿನ ಸಾಲ ಕೊಡಬಹುದು, ಅಲ್ಲದೇ ಎಲ್ಲ ಸದಸ್ಯರ ಸಹಕಾರದಿಂದ ಸಂಘ ಅಭಿವೃದ್ದಿಯತ್ತ ಸಾಗುತ್ತಿದೆ ಎಂದು ತಿಳಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎನ್. ಕವಿತಾ ವಾರ್ಷಿಕ ವರದಿ ಮಂಡಿಸಿದರು. ಕುಮಾರ್ ವಿಶ್ವಾಸ್ ಪ್ರಾರ್ಥಿಸಿದರು, ಬಿ.ಎಸ್. ಗಿರೀಶ್ ಸ್ವಾಗತಿಸಿದರು.
July 24, 2024