ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಸಿದ್ಧಗಂಗಾ ಶಾಲೆಯ ವಿಜೇತ ಮಕ್ಕಳು

ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಸಿದ್ಧಗಂಗಾ ಶಾಲೆಯ ವಿಜೇತ ಮಕ್ಕಳು

ದಾವಣಗೆರೆ, ಆ. 31- ಹಿರಿಯ ಪ್ರಾಥಮಿಕ ಶಾಲೆಗಳ ಕ್ಲಸ್ಟರ್‌ ಮಟ್ಟದ ಕ್ರೀಡಾಕೂಟದಲ್ಲಿ ನಗರದ ಸಿದ್ಧಗಂಗಾ ಶಾಲೆಯ ಮಕ್ಕಳು ಗುಂಪು ಮತ್ತು ಮೇಲಾಟಗಳಲ್ಲಿ ಸ್ಪರ್ಧಿಸಿ, ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ಬಾಲಕರ ಗುಂಪು ಆಟಗಳಲ್ಲಿ ಸಂಜಯ್‌ ಎ.ಎಂ. ತಂಡದವರು ವಾಲಿಬಾಲ್‌ನಲ್ಲಿ ಪ್ರಥಮ, ಅಮೋಘ ಆರ್‌. ತಂಡದವರು ಥ್ರೋಬಾಲ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. 

ಬಾಲಕರ ಮೇಲಾಟಗಳಲ್ಲಿ ಸೈಯದ್‌ ಅಯಾನ್‌ 600 ಮೀ ಓಟದಲ್ಲಿ ದ್ವಿತೀಯ, ಬಾಲಾಜಿ ಜಿ. ಎಸ್.‌ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದರೆ, ಬಾಲಕಿಯರಲ್ಲಿ ವಿಂಧ್ಯ ಕೆ.ಎಂ. 600 ಮೀ, 400 ಮೀ ಓಟದಲ್ಲಿ ಪ್ರಥಮ, ಸಂಜನ ಎಂ. ಪಿ ಗುಂಡು ಎಸೆತದಲ್ಲಿ ಪ್ರಥಮ, ಶ್ರೇಯಾ ಕೆ. ಆರ್.‌ ಎತ್ತರ ಜಿಗಿತದಲ್ಲಿ ದ್ವಿತೀಯ, ಹರ್ಷಿತ ಪಿ. ಎಸ್‌ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಜೇತ ಮತ್ತು ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳನ್ನು ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿ ಸೌಜ, ಕಾರ್ಯದರ್ಶಿ ಹೇಮಂತ್‌, ಮುಖ್ಯ ಶಿಕ್ಷಕಿ ರೇಖಾರಾಣಿ ಮತ್ತು ದೈಹಿಕ ಶಿಕ್ಷಕರಾದ ರಘು, ಶ್ರೀನಿವಾಸ್‌, ದುಗ್ಗಪ್ಪ, ಆರೋಗ್ಯಮ್ಮ ಮತ್ತು ಸುನೀತ ಅವರು ಅಭಿನಂದಿಸಿದ್ದಾರೆ. 

error: Content is protected !!