ಅಂಧರ ಸೇವೆಗೆ ಸಂದ ಗೌರವ ಜೆ.ಎನ್. ಕರಿಬಸಪ್ಪಗೆ ಗೌರವ ಡಾಕ್ಟರೇಟ್

ಅಂಧರ ಸೇವೆಗೆ ಸಂದ ಗೌರವ ಜೆ.ಎನ್. ಕರಿಬಸಪ್ಪಗೆ ಗೌರವ ಡಾಕ್ಟರೇಟ್

ದಾವಣಗೆರೆ, ಆ.31- ಬಾಡ ಕ್ರಾಸ್‌ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದ ಲಿಂ. ಪಂಚಾಕ್ಷರ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿ  ಸಹ ಕಾರ್ಯದರ್ಶಿ ಜೆ.ಎನ್. ಕರಿಬಸಪ್ಪ ಅವರ ಸಮಾಜ ಸೇವೆ ಪರಿಗಣಿಸಿ,  ಎಎಸ್ಐಎ ಅಂತರರಾಷ್ಟ್ರೀಯ ಸಾಂಸ್ಕೃತಿಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿದೆ. 

ತಮಿಳುನಾಡಿನ ಹೊಸೂರಿನಲ್ಲಿ ಮೊನ್ನೆ ಜರುಗಿದ ಸಭೆಯಲ್ಲಿ ಪದವಿ ಪ್ರದಾನ ಮಾಡಲಾಯಿತು. ವೀರೇಶ್ವರ ಪುಣ್ಯಾಶ್ರಮದ ಸುಮಾರು 50ಕ್ಕೂ ಹೆಚ್ಚು ಅಂಧ ವಿದ್ಯಾರ್ಥಿಗಳ ಊಟ, ವಸತಿ, ಪಾಲನೆ ಮಾಡುತ್ತಾ, ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕರಿಬಸಪ್ಪನವರಿಗೆ ಗೌರವ ಡಾಕ್ಟರೇಟ್ ಪದವಿ ಸಂದಿದೆ. 

ಈ ಸಂಬಂಧ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕರಿಬಸಪ್ಪ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.   ಗವಾಯಿಗಳವರ ಅಂಧರ ಶಿಕ್ಷಣ ಸಮಿತಿ ಅಧ್ಯಕ್ಷ  ಅಥಣಿ ವೀರಣ್ಣ, ಎ.ಎಚ್. ಶಿವಮೂರ್ತಿ ಸ್ವಾಮಿ, ಬಸವನಗೌಡ್ರು, ಹೆಚ್.ವಿ.ಮಂಜುನಾಥ್, ಪತ್ರಕರ್ತ ಬಕ್ಕೇಶ್ ನಾಗನೂರು, ಪ್ರೇರಣಾ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷೆ ಚೇತನಾ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!