ಹೊನ್ನಾಳಿ, ಆ. 31 – ಪಟ್ಟಣದ ಜನತಾ ಉರ್ದು ಪ್ರೌಢ ಶಾಲೆಯಲ್ಲಿಂದು ರಾಷ್ಟ್ರಪತಿಯಿಂದ ನ್ಯಾಷನಲ್ ಪ್ಲಾರೆನ್ಸ್ ನೈಟಿಂಗೇಲ್ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುವ ಹೊನ್ನಾಳಿಯ ಆಶಾ ಕಾರ್ಯಕರ್ತೆ ಟಿ. ನಾಗರತ್ನ ಅವರಿಗೆ ಜನತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಹೆಚ್. ಕಡಮನೆ ಅವರು ಸನ್ಮಾನಿಸಿ ಗೌರವಿಸಿದರು.
ಸಮಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶಾಹಿರಾಬಾನು, ನಿವೃತ್ತ ಶಿಕ್ಷಕಿ ಶಕೀಲ ಅಹಮದ್, ಸಹಶಿಕ್ಷಕಿ ನಜೀಮಾಬಾನು, ಮೊಹಮ್ಮದ್ ಹಯಾತ್ವುಲ್ಲಾ, ಮೊಹಮ್ಮದರಫಿ, ಕುಮಾರ ದೇವಾಂಗ್, ಸುಬಾನ್ಸಾಬ್, ಕೆ.ಸುತಾರ್, ಚೀಲೂರು ಹರ್ಷತ್ಜಬೀ, ಶಂಷತ್ ಇನ್ನಿತರರಿದ್ದರು.