ದಾವಣಗೆರೆ, ಆ.31- ನಗರದ ಪಿ.ಜೆ.ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಏರ್ಪಾಡಾಗಿದ್ದ 352ನೇ ಆರಾಧನಾ ಮಹೋತ್ಸವದಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸಂಜೆ ಭೇಟಿ ನೀಡಿ ರಾಯರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಶ್ರೀಮತಿ ಲತಿಕಾ ಡಿ.ಶೆಟ್ಟಿ, ಮಹಾನಗರ ಪಾಲಿಕೆ ಸದಸ್ಯ ಎ.ನಾಗರಾಜ್, ರಾಮಚಂದ್ರ ಭಟ್ಟರು, ಪಂಚಪ್ಪ ತೇರದಾಳ್, ಪ್ರಭು, ವಿಜಯಕುಮಾರ್ ಜೈನ್, ರಾಜು ಭಂಡಾರಿ, ಮಧು ಪವಾರ್, ವೆಂಕಟೇಶ್, ರಾಜು ಚೌಹಾಣ್, ಜಗದೀಶ್, ಪರಶುರಾಮ್, ಸಿರಿಲ್ ಪ್ರದೀಪ್, ಯುವರಾಜ್ ಮತ್ತಿತರರು ಇದ್ದರು.