ಈಶ್ವರೀಯ ವಿಶ್ವವಿದ್ಯಾಲಯ ಆಶಾದಾಯಕ ಜೀವನಕ್ಕೆ ದಾರಿದೀಪ

ಈಶ್ವರೀಯ ವಿಶ್ವವಿದ್ಯಾಲಯ ಆಶಾದಾಯಕ ಜೀವನಕ್ಕೆ ದಾರಿದೀಪ

 ಹೊನ್ನಾಳಿಯಲ್ಲಿನ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಶಾಸಕ ಡಿ.ಜಿ. ಶಾಂತನಗೌಡ

ಹೊನ್ನಾಳಿ, ಆ.28- ಸಂಸಾರದ ನೆಮ್ಮದಿ ಕಳೆದುಕೊಂಡ ಕುಟುಂಬದ ಅನೇಕ ಜನರಿಗೆ ಹಾಗು ಹಿರಿಯ ಜೀವಿಗಳಿಗೆ ಈಶ್ವರೀಯ ವಿಶ್ವವಿದ್ಯಾಲಯಗಳು ಒಂದು ವರದಾನ  ವಾಗಿದ್ದು,   ಆಶಾದಾಯಕ ಜೀವನಕ್ಕೆ ದಾರಿದೀಪವಾಗಿವೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಹೊನ್ನಾಳಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ನಿನ್ನೆ ನಡೆದ ರಾಜಯೋಗಿನಿ ಬ್ರಹ್ಮಾಕುಮಾರಿ ದಾದಿ ಪ್ರಕಾಶಮಣಿಯವರ 16ನೇ ವರ್ಷದ ಸ್ಮೃ ತಿ ದಿನ ಮತ್ತು ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

ತಾವು ಈಶ್ವರೀಯ ವಿದ್ಯಾಲಯ ಕೂಲಂಬಿ ಹಾಗು ಮಲೇಬೆನ್ನೂರು ಗ್ರಾಮದಲ್ಲಿ ನಡೆಸುವ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ಆ ಸಮಾರಂಭಗಳು  ಹೆಚ್ಚು ಅರ್ಥ ಗರ್ಭಿತವಾಗಿದ್ದವು.  ತಮ್ಮ ಕುಟುಂಬದೊಂದಿಗೆ 12 ವರ್ಷದ ಕೆಳಗೆ ಮೌಂಟ್ ಅಬುಗೆ ಭೇಟಿ ನೀಡಿದ್ದು, ಆ ಕ್ಷಣವನ್ನು ಸ್ಮರಿಸಿದ ಶಾಸಕರು, ವಿಚಿತ್ರವಾದರೂ ಸತ್ಯವೆನ್ನುವ ರೀತಿ, ಅಲ್ಲಿನ ದಿನ ನಿತ್ಯದ ಸಂಪ್ರದಾಯ ಸಭೆ, ಸಮಾರಂಭಗಳು   ಪರಿಣಾಮ ತರುವಂತಾಗಿವೆ ಎಂದು ಶ್ಲ್ಯಾಘಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗದ ಈಶ್ವರೀಯ  ವಿಶ್ವವಿದ್ಯಾಲಯದ  ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಅನುಸೂಯ ಅವರು ಮಾತನಾಡಿ, ರಾಖಿ ಹಬ್ಬದ ಮಹಿಮೆ ಮತ್ತು ರಾಖಿಗೆ ಇರುವ ಅನೇಕ ಪೌರಾಣಿಕ, ಐತಿಹಾಸಿಕ ಸಂದರ್ಭಗಳನ್ನು ವಿವರಿಸಿದರು. ಅಸುರನ ವಿರುದ್ಧ ಇಂದ್ರನ ಗೆಲುವು, ಸಂಕಷ್ಟದ ದಿನಗಳಲಿದ್ದ ದ್ರೌಪದಿಗೆ ಕೃಷ್ಣನಿಂದಾದ ಬಟ್ಟೆಯ ನೆರವು ಹಾಗು ಯುದ್ಧದಲ್ಲಿ ಸೋತಿದ್ದ ಅಲೆಗ್ಸ್ಯಾಂಡರ್‌ಗೆ ಗೆದ್ದಿದ್ದ ರಾಜನಿಂದ ಪತ್ನಿಯ ಮೂಲಕ ಜೀವದಾನ ಸಿಗುವಲ್ಲಿ ನೆರವಾಗಿದ್ದು, ಇದೇ ರಕ್ಷಾಬಂಧನವಾಗಿತ್ತು. ಇಂದಿಗೂ ಮಹಿಳೆಯರಿಗೆ ದೈವೀಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹಾಗು ತಾನು ಸಶಕ್ತಳಾಗಲು, ಸಬಲೆಯಾಗುವಲ್ಲಿ ರಕ್ಷ ಬಂಧನದ ಅವಶ್ಯಕತೆ ಹೆಚ್ಚಿದೆ ಎಂದರು.

ಹೊನ್ನಾಳಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕ ರಾದ ಬ್ರಹ್ಮಾಕುಮಾರಿ ಜ್ಯೋತಿ ಅವರು ಪ್ರಾಸ್ತಾವಿಕ ಭಾಷಣ ದಲ್ಲಿ, ರಕ್ಷಬಂಧನವು ಮಹಿಳೆಯರನ್ನು ಸ್ವತಂತ್ರರನ್ನಾಗಿಸುವುದು ಅನೇಕ ಬಂಧನಗಳಿಂದ ಮುಕ್ತಗೊಳಿಸುವ ಶಕ್ತಿಹೊಂದಿದೆ ಎಂದರು 

ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ಹೆಚ್.ಎ. ಉಮಾಪತಿ, ಬ್ರಹ್ಮಾಕುಮಾರ ನಿಂಗಣ್ಣ, ಹೊನ್ನಾಳಿ ಪುರಸಭೆ ಸದಸ್ಯೆ ಸುಮಾ ಡಾ. ಕೆಂಚಪ್ಪ, ಕೆಎಸ್‍ಆರ್ ಟಿಸಿ ಮ್ಯಾನೇಜರ್ ಮಹೇಶ್ವರಪ್ಪ, ಚೀಲೂರು ಜ್ಞಾನವಾಹಿನಿ ವಿದ್ಯಾಸಂಸ್ಥೆ ಪ್ರಾಂಶುಪಾಲ ರವಿಕುಮಾರ್, ದಾಗಿನಕಟ್ಟೆ ಬಸವನಗೌಡ ಇನ್ನಿತರರಿದ್ದರು.

error: Content is protected !!