ದೇವರಬೆಳಕೆರೆ ಪಿಕಪ್ ನಾಲೆ ಹೂಳು ತೆಗೆಸಿದ ಶ್ರೀನಿವಾಸ್

ದೇವರಬೆಳಕೆರೆ ಪಿಕಪ್ ನಾಲೆ  ಹೂಳು ತೆಗೆಸಿದ ಶ್ರೀನಿವಾಸ್

ಮಲೇಬೆನ್ನೂರು, ಆ. 26- ದೇವರಬೆಳಕೆರೆ ಪಿಕಪ್ ಡ್ಯಾಂನ ಗಾಂಜಿ ವೀರಪ್ಪ ನಾಲೆಯಲ್ಲಿ ತುಂಬಿಕೊಂಡಿದ್ದ ಹೂಳನ್ನು ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರು ಭದ್ರಾ ನಾಲಾ ನಂ. 3 ಉಪ ವಿಭಾಗದ ಎಇಇ ಧನಂಜಯ ಹಾಗೂ ರೈತರ ಸಮ್ಮುಖದಲ್ಲಿ ಇಟಾಚಿ ಮೂಲಕ ತೆರವುಗೊಳಿಸಿದರು.

ನಾಲೆಯಲ್ಲಿ ಹೂಳು ತುಂಬಿಕೊಂಡಿದ್ದರಿಂದ ಬನ್ನಿಕೋಡು, ಶಿವನಹಳ್ಳಿ ಸೇರಿದಂತೆ, ಕೊನೆ ಭಾಗದ ರೈತರಿಗೆ ನೀರು ಹೋಗುತ್ತಿರಲಿಲ್ಲ. ಈ ಬಗ್ಗೆ ರೈತರು ಶ್ರೀನಿವಾಸ್ ಅವರ ಗಮನ ಸೆಳೆದಾಗ ಇಟಾಚಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಹೂಳನ್ನು ತೆರವುಗೊಳಿಸಿ ನಾಲೆಯಲ್ಲಿ ನೀರು ಸರಾಗವಾಗಿ ಕೆಳ ಭಾಗಕ್ಕೆ ಹೋಗುವಂತೆ ಮಾಡಿ ರೈತರ ಮೆಚ್ಚುಗೆಗೆ ಪಾತ್ರರಾದರು.

error: Content is protected !!