ರಾಷ್ಟ್ರೀಯ ಕ್ರೀಡಾ ದಿನಾಚರಣೆ : ನಗರದಲ್ಲಿ ರಸ್ತೆ ಓಟ

ರಾಷ್ಟ್ರೀಯ  ಕ್ರೀಡಾ ದಿನಾಚರಣೆ  : ನಗರದಲ್ಲಿ ರಸ್ತೆ ಓಟ

ದಾವಣಗೆರೆ, ಆ.25- ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಿವಿಧ ಕ್ರೀಡೆಗಳನ್ನು ಆಯೋಜಿಸಿದ್ದು, ಇಂದು ಬೆಳಗ್ಗೆ ರಸ್ತೆ ಓಟವನ್ನು ಪುರುಷರಿಗಾಗಿ 6 ಕಿ.ಮೀ, ಮಹಿಳೆಯರಿಗಾಗಿ 3 ಕಿ.ಮೀ ನಡೆಸಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಹರ್ಷ ಇವರು ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಕಬಡ್ಡಿ ತರಬೇತುದಾರರಾದ ಶ್ರೀಶೈಲ, ಖೋಖೋ ತರಬೇತುದಾರ ಎಂ. ರಾಮಲಿಂಗಪ್ಪ, ಮಹಿಳಾ ತರಬೇತುದಾರರಾದ ಎಂ.ಸಿ. ಸುನೀತ, ಕುಸ್ತಿ  ತರಬೇತುದಾರ ಕೆ.ವಿನೋದ್ ಕುಮಾರ್, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎನ್.ಕೆ.ಕೊಟ್ರೇಶ್, ಕಚೇರಿ ಸಿಬ್ಬಂದಿಗಳಾದ ಸೈಯದ್ ಬಾಷಾ, ಅಶೋಕ್, ಪರಶುರಾಮ್ ಮತ್ತು ಹಿರಿಯ ಕ್ರೀಡಾಪಟುಗಳು, ಕ್ರೀಡಾ ಅಭಿಮಾನಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

error: Content is protected !!