ಹಿಂದೂ ಮಹಾಗಣಪತಿಯ ಹಂದರ ಕಂಬದ ಪೂಜೆ

ಹಿಂದೂ ಮಹಾಗಣಪತಿಯ ಹಂದರ ಕಂಬದ ಪೂಜೆ

ಹರಿಹರ, ಅ. 24 – ಗಣೇಶ ಮಹೋತ್ಸವ ಆಚರಣೆಗಾಗಿ ನಗರದ ಪೇಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಹಿಂದೂ ಮಹಾಗಣಪತಿ ಮಹೋತ್ಸವ ಸಮಿತಿಯ ವತಿಯಿಂದ ಗೋ ಪೂಜೆಯೊಂದಿಗೆ ಹಂದರ ಕಂಬದ ಪೂಜೆ ನೆರವೇರಿಸಲಾಯಿತು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಜಿಪಂ ಮಾಜಿ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ, ಬಿಜೆಪಿ ಮುಖಂಡ ಅರ್ಜುನ ಬಿ.ಪಿ. ಹರೀಶ್, ಬಿಜೆಪಿ ನಗರ ಘಟಕದ ಮಾಜಿ ಅಧ್ಯಕ್ಷ ಶಿವಾನಂದಪ್ಪ ಹಲಸಬಾಳು. ನಗರಸಭೆ ಸದಸ್ಯ ಎ.ಬಿ. ವಿಜಯಕುಮಾರ್, ದಾವಣಗೆರೆ ಜೊಳ್ಳಿ ಗುರು, ಸೀಮೆಎಣ್ಣೆ ಮಲ್ಲೇಶ್, ಸತೀಶ್ ಪೂಜಾರಿ ಸೇರಿದಂತೆ ಹಲವು ಪ್ರಮುಖ ನಾಯಕರು ಗೋವಿಗೆ ಹಾಗೂ ಹಂದರ ಕಂಬಕ್ಕೆ ಪೂಜೆ ಸಲ್ಲಿಸಿದರು.

ಹಿಂದೂ ಮಹಾಗಣಪತಿ ಸಮಿತಿಯ ಅಧ್ಯಕ್ಷ ಎ.ಬಿ. ವಿಜಯಕುಮಾರ್ ಮಾತನಾಡಿ, ಈ ವರ್ಷ ಶ್ರೀ ಹರಿಹರೇಶ್ವರ ದೇವಾಲಯದ ಮಾದರಿಯಲ್ಲಿ ಮಹಾ ಮಂಟಪ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನ ಅರ್ಚಕ ವೆಂಕಟೇಶ, ಹಿಂದೂ ಜಾಗರಣ ವೇದಿಕೆಯ ದಿನೇಶ್, ಹಿಂದೂ ಮಹಾಗಣಪತಿ ಟ್ರಸ್ಟ್ ಅಧ್ಯಕ್ಷ ಬಸವನಗೌಡ, ಖಜಾಂಚಿ ಗಿರೀಶ್ ಗೌಡ, ಉಪಾಧ್ಯಕ್ಷ ಸ್ವಾತಿ ಹನುಮಂತಪ್ಪ, ಕಾರ್ಯದರ್ಶಿ ಸಂತೋಷ್ ಗುಡಿಮನಿ, ಎಬಿವಿಪಿ ಮುಖಂಡ ವೀರೇಶ್ ಅಜ್ಜಣ್ಣನವರ್, ಚಂದ್ರಕಾಂತ, ಚಂದನ್ ಮೂರ್ಕಲ್, ರಟ್ಟಿಹಳ್ಳಿ ಮಂಜುನಾಥ್, ಮಹೇಶ್, ಬಿಜೆಪಿ ಅಧ್ಯಕ್ಷ ಅಜಿತ್ ಸಾವಂತ್, ಹಿಂಡಸಘಟ್ಟೆ ಲಿಂಗರಾಜ್, ತುಳಜಪ್ಪ ಭೂತೆ, ಹೆಚ್. ಮಂಜನಾಯ್ಕ್, ರಾಜು ರೋಖಡೆ, ಶಿವಪ್ರಕಾಶ್ ಶಾಸ್ತ್ರಿ, ಧರಣೇಂದ್ರ, ಕೃಷ್ಣಮೂರ್ತಿ ಶೆಟ್ಟಿ, ಅಮರಾವತಿ ಪಾಲಾಕ್ಷಪ್ಪ, ಕಸಾಪ ಗೌರವ ಕಾರ್ಯದರ್ಶಿ ಚಿದಾನಂದ ಕಂಚಿಕೇರಿ, ಅಣ್ಣಪ್ಪ ಲಕ್ಕಶೆಟ್ಟಿಹಳ್ಳಿ, ಸಂತೋಷ, ಆನಂದ್, ಶ್ರೀನಿವಾಸ್ ಚಂದಾಪೂರ್, ಅಂಗಡಿ ಮಂಜುನಾಥ್, ಅಡಕಿ ಕುಮಾರ್, ಹೋವಳೆ ರಾಜ ಗುರು, ಅಣ್ಣಪ್ಪ, ಅಂಬುಜಾ ರಾಜೊಳ್ಳಿ, ಪ್ರಮೀಳಾ ನಲ್ಲೂರು, ರೂಪಾ ಕಾಟ್ವೆ, ಸುಧಾ ಸೋಳಂಕಿ ಮತ್ತಿತರರು ಹಾಜರಿದ್ದರು.

error: Content is protected !!