ವಿಶ್ವಬಂಧು ಸೊಸೈಟಿ ಅಧ್ಯಕ್ಷರಾಗಿ ಯಲವಟ್ಟಿಯ ಡಿ.ಯೋಮಕೇಶ್ವರಪ್ಪ

ವಿಶ್ವಬಂಧು ಸೊಸೈಟಿ ಅಧ್ಯಕ್ಷರಾಗಿ ಯಲವಟ್ಟಿಯ ಡಿ.ಯೋಮಕೇಶ್ವರಪ್ಪ

ಹರಿಹರ, ಆ.23- ಇಲ್ಲಿನ ಶ್ರೀ ವಿಶ್ವಬಂಧು ಕ್ರೆಡಿಟ್ ಕೋ ಆಪ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಯಲವಟ್ಟಿಯ ಡಿ.ಯೋಮಕೇಶ್ವರಪ್ಪ ಮತ್ತು ಉಪಾಧ್ಯಕ್ಷರಾಗಿ ಹೊಳೆಸಿರಿಗೆರೆಯ ಶ್ರೀಮತಿ ನೀಲಮ್ಮ ಎಂ.ಮಂಜಪ್ಪ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುನೀತಾ ಚುನಾವಣಾಧಿಕಾರಿಯಾಗಿದ್ದರು. ಸೊಸೈಟಿಯ ನಿರ್ದೇಶಕರಾದ ಬೆಳ್ಳೂಡಿ ರಾಮಚಂದ್ರಪ್ಪ, ಕುಂಬಳೂರಿನ ಬಿ.ಶಂಭುಲಿಂಗಪ್ಪ, ಹೊಳೆಸಿರಿಗೆರೆಯ ಕೆ.ಶಿವಶಂಕರಪ್ಪ, ಎಂ.ಪರಮೇಶ್ವರಪ್ಪ, ಹರಗನಹಳ್ಳಿಯ ಕೆ.ಮಂಜುನಾಥ್, ಅಮರಾವತಿಯ ಹೆಚ್.ಬಿ.ನಾಗರಾಜ್, ಯಲವಟ್ಟಿಯ ಬಿ.ಸಿದ್ದೇಶ್, ಹರಿಹರದ ಜಿ.ಎನ್.ಚಂದ್ರಪ್ಪ, ಎಂ.ಬಸವರಾಜಪ್ಪ, ಕುಂಬಳೂರಿನ ಹೆಚ್.ಸಿ.ಉಮೇಶ್, ಹೆಚ್.ವಿ.ಚಂದ್ರಿಕಾ, ಸಿದ್ದಪ್ಪ ಬೆಳ್ಳೂಡಿ ಮತ್ತು ಬೆಳ್ಳೂಡಿಯ ಎಂ.ಕೆ.ಪ್ರಕಾಶ್ ಈ ವೇಳೆ ಹಾಜರಿದ್ದರು. ಸೊಸೈಟಿ ಕಾರ್ಯದರ್ಶಿ ಕೆ.ಟಿ.ಶಂಭುಲಿಂಗಪ್ಪ ಸ್ವಾಗತಿಸಿದರು.

error: Content is protected !!