ಲಯನ್ಸ್‌ನಿಂದ ನಿವೃತ್ತ ಬಿ.ಎಸ್.ಎಫ್ ಯೋಧ ಮಂಜುನಾಥ್ ನಾಯಕ್‌ಗೆ ಸನ್ಮಾನ

ಲಯನ್ಸ್‌ನಿಂದ ನಿವೃತ್ತ ಬಿ.ಎಸ್.ಎಫ್ ಯೋಧ ಮಂಜುನಾಥ್ ನಾಯಕ್‌ಗೆ ಸನ್ಮಾನ

ದಾವಣಗೆರೆ, ಆ. 23- ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಭವನದಲ್ಲಿ ನಡೆದ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮದಲ್ಲಿ ಲಯನ್ಸ್  ಕ್ಲಬ್ ಅಧ್ಯಕ್ಷ  ನೀಲಿ ಉಮೇಶ್ ಅವರು ಧ್ವಜಾರೋಹಣ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ದೇಶ ಕಾಯುವ ನಿವೃತ್ತ ಬಿ.ಎಸ್.ಎಫ್ ಯೋಧ ಮಂಜುನಾಥ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಭೀಮಾನಂದ ಅವರು ಮಂಜುನಾಥ್ ನಾಯಕ್ ಅವರನ್ನು ಪರಿಚಯಿಸಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ವತಿಯಿಂದ ಪ್ರತಿಭಾ ಪುರಸ್ಕಾರ, ಸಸಿ ನೆಡುವ ಕಾರ್ಯಕ್ರಮ ಹಾಗೂ ಲಯನ್ಸ್ ಕ್ಲಬ್ ನ ಹಿರಿಯ ಸದಸ್ಯರಾದ ಬಿ.ವಿ.ಗಂಗಪ್ಪ ಶೆಟ್ಟಿ ಅವರ ಹುಟ್ಟು ಹಬ್ಬದ ಅಂಗವಾಗಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಗವರ್ನರ್  ಡಾ|| ಬಿ.ಎಸ್. ನಾಗಪ್ರಕಾಶ್,  ಪ್ರಾಂತಿಯ ಅಧ್ಯಕ್ಷ  ಎಸ್. ಓಂಕಾರಪ್ಪ, ವಲಯ ಅಧ್ಯಕ್ಷ  ಎನ್.ಆರ್. ನಾಗಭೂಷಣ್ ರಾವ್, ಖಜಾಂಚಿ ಮಾಲಿಂಗೇಶ್, ಸಹ ಕಾರ್ಯದರ್ಶಿ ಅಮಿತ್ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!