ಮೌನೇಶ್ವರ ಬಡಾವಣೆ ನಾಗರಿಕ ಹಿತ ರಕ್ಷಣಾ ಸಮಿತಿಯಿಂದ ಪುರಸ್ಕಾರ

ಮೌನೇಶ್ವರ ಬಡಾವಣೆ ನಾಗರಿಕ  ಹಿತ ರಕ್ಷಣಾ ಸಮಿತಿಯಿಂದ ಪುರಸ್ಕಾರ

ದಾವಣಗೆರೆ, ಆ. 22- ಮೌನೇಶ್ವರ ಬಡಾವಣೆ ನಾಗರಿಕ ಹಿತ ರಕ್ಷಣಾ ಸಮಿತಿ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತರಿಗೆ ಪುರಸ್ಕರಿಸಲಾಯಿತು.  

ಅತಿಥಿಗಳಾಗಿ ಸೋಮಲಿಂಗಪ್ಪ, ಗೌರವಾಧ್ಯಕ್ಷ ಬಿ. ಲೋಕೇಶ್, ಪ್ರೇಮ, ಖಜಾಂಚಿ ರುದ್ರಮುನೇಶ್ವರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಮಿತಿಯ ಅಧ್ಯಕ್ಷ ಬಿ.ಎಸ್. ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕು. ಕವನ ಪ್ರಾರ್ಥಿಸಿದರು. ಜಿ.ಬಿ. ಜಗದೀಶ್ ಸ್ವಾಗತಿಸಿದರು.  ಚಂದ್ರಶೇಖರ್ ಎಸ್. ನೂಲ ವಂದಿಸಿದರು. ಬಿ.ಕೆ. ಬಸಪ್ಪ ಕಾರ್ಯಕ್ರಮ ನಿರೂಪಿಸಿದರು.

error: Content is protected !!