ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಗೆ ಗೈರಾದ 9 ಅಧಿಕಾರಿಗಳಿಗೆ ನೋಟಿಸ್

ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ  ಸಭೆಗೆ ಗೈರಾದ 9 ಅಧಿಕಾರಿಗಳಿಗೆ ನೋಟಿಸ್

ಹೊನ್ನಾಳಿ, ಆ.2- ಆಗಸ್ಟ್ 15ರಂದು ಆಚರಿಸಲಿರುವ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬುಧವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ  ಪೂರ್ವಭಾವಿ ಸಭೆಗೆ ಪೊಲೀಸ್ ಇನ್ಸ್‌ಪೆಕ್ಟರ್, ಬಿ.ಇ.ಒ, ಉಪನೋಂದಣಾಧಿಕಾರಿ, ಎಡಿಎಲ್‍ಆರ್, ಅಬಕಾರಿ, ಮೀನುಗಾರಿಕೆ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ, ಪುರಸಭೆಯ ಮುಖ್ಯಾಧಿಕಾರಿ, ಉಪಖಜಾನೆಯ ಅಧಿಕಾರಿಗಳು ಗೈರು ಹಾಜರಾಗಿದ್ದು, ಅವರುಗಳಿಗೆ ನೋಟಿಸ್ ಜಾರಿ ಮಾಡಿ ಸಭೆಯನ್ನು ನಾಳೆಗೆ ಮುಂದೂಡಿರುವ ಘಟನೆ ಜರುಗಿದೆ. 

ಪೂರ್ವಭಾವಿ ಸಭೆಗೆ ತಾಲ್ಲೂ ಕಿನ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳೇ ಗೈರುಹಾಜರಾಗಿದ್ದನ್ನು ಗಮನಿಸಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರು ತೀವ್ರ ಅಸಮಾ ಧಾನಗೊಂಡು ಸಭೆಗೆ ಗೈರುಹಾಜ ರಾಗಿರುವ ಎಲ್ಲಾ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷರು ಹಾಗೂ ತಹಶೀಲ್ದಾರ್ ತಿರುಪತಿ ಪಾಟೀಲ್‍ಗೆ ಸೂಚಿಸಿ ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರುವುದಾಗಿ ಹೇಳಿ ಸಭೆಯನ್ನು ಮುಂದೂಡಿದ ಪ್ರಸಂಗ ನಡೆಯಿತು.

ಸಭೆಯಲ್ಲಿ ಅಧಿಕಾರಿಗಳಿಗಿಂತ ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮಾಜಿ ಸೈನಿಕರ ಕ್ಷೇಮಾಭಿವೃದ್ದಿ ಸಂಘದ ಪದಾಧಿ ಕಾರಿಗಳು ಹಾಗೂ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. 

ಆದರೆ, ಸರ್ಕಾರಿ ಇಲಾಖೆಗಳ ಕೆಲವೇ ಅಧಿಕಾರಿಗಳು ಮಾತ್ರ  ಹಾಜರಾಗಿ ದ್ದು ಬಹಳಷ್ಟು ಜನ ಅಧಿಕಾರಿಗಳು ಸಭೆಗೆ ಹಾಜರಾಗದೇ ತಮ್ಮ ಬದಲಿಗೆ ಬೇರೆ ಅಧಿಕಾರಿಗಳನ್ನು ಕಳುಹಿರುವುದನ್ನು ಕಂಡು ಉಪ ವಿಭಾಗಾಧಿಕಾರಿಯವರು ತೀವ್ರ ಬೇಸರಗೊಂಡು ಪಕ್ಕದಲ್ಲೇ ಉಪಸ್ಥಿ ತರಿದ್ದ ತಹಶೀಲ್ದಾರ್ ತಿರುಪತಿ ಪಾಟೀಲ್ ಅವರಿಗೆ ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ಕೂಡಲೇ ನೋಟಿಸ್ ಜಾರಿ ಮಾಡುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅನೇಕ ಮಹಾನ್ ಪುರುಷರ ತ್ಯಾಗ, ಬಲಿದಾನಗಳಿಂದಾಗಿ ಬ್ರಿಟೀಷರ ಆಳ್ವಿಕೆ ಯಿಂದ  ನಮ್ಮ ದೇಶ ಸ್ವಾತಂತ್ರ್ಯ ಪಡೆದಿದ್ದು, ಈ ಅವಿಸ್ಮರಣೀಯ ದಿನವನ್ನು ಪ್ರತಿಯೊಬ್ಬ ಭಾರತೀಯ ಪ್ರಜೆ ಹಬ್ಬದ ರೂಪದಲ್ಲಿ ಅಚರಿಸು ವುದು ಅವರ ಕರ್ತವ್ಯವಾಗಿದೆ ಹಾಗೂ ಜವಾಬ್ದಾರಿ ಕೂಡ ಅಗಿದ್ದು, ಸ್ವಾತಂತ್ರ್ಯ ದಿನಾಚರಣೆಯಂತಹ ಪವಿತ್ರ ರಾಷ್ಟ್ರೀಯ ಹಬ್ಬ ಆಚರಣೆಯ ರೂಪುರೇಷೆಗಳನ್ನು ರೂಪಿಸುವ ಹಾಗೂ ಆಚರಣೆಯ ಜವಾಬ್ದಾರಿಗಳನ್ನು ನಿಭಾಯಿಸುವ ಪ್ರಮುಖ ಇಲಾಖೆಗಳ ಅಧಿಕಾರಿ ಗಳೇ ಗೈರುಹಾಜರಾಗಿರುವುದು ತಾಲೂಕು ಅಡಳಿತಕ್ಕೆ ಮುಜುಗರ ತರುವ ವಿಷಯವಾಗಿದ್ದು, ತಮಗೂ ಕೂಡ ತೀವ್ರ ಬೇಸರ ತಂದಿದ್ದು ಈ ಘಟನೆಯ ವಿವರಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತರುವುದಾಗಿ ಸಭೆಯಲ್ಲಿ ತಿಳಿಸಿ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.  

ಸಭೆಯಲ್ಲಿ ಹಾಜರಿದ್ದ ಮಾಜಿ ಸೈನಿಕರ ಕ್ಷೇಮಾಭಿವೃದ್ದಿ ಸಂಘದ ತಾಲ್ಲೂಕು ಅಧ್ಯಕ್ಷ ಪರಮೇಶ್ವರಪ್ಪ ಗೌಡ, ಕಾರ್ಯದರ್ಶಿ ಎಂ. ಗಂಗಾಧರಪ್ಪ ಕತ್ತಿಗೆ ಮತ್ತು ಯುವಶಕ್ತಿ ಒಕ್ಕೂಟದ ಮುಖಂಡ ಕತ್ತಿಗೆ ನಾಗರಾಜ್ ಅವರುಗಳು ಮಾತನಾಡಿ, ಬಹುತೇಕ ಸಭೆಗಳಿಗೆ ಇಲಾಖೆಯ ಪ್ರಮುಖ ಅಧಿಕಾರಿಗಳು ಭಾಗವಹಿಸದೇ ತಮ್ಮ ಬದಲಾಗಿ ಇತರೆ ಅಧಿಕಾರಿಗಳನ್ನು ಕಳುಹಿಸುವು ದನ್ನು ರೂಢಿಯನ್ನಾಗಿ ಮಾಡಿಕೊಂಡಿದ್ದು, ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬದ ಪೂರ್ವಭಾವಿ ಸಭೆಗೆ ಗೈರುಹಾಜರಾಗಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಪತ್ರಕರ್ತರೊಂದಿಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.  

error: Content is protected !!