ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಗೊಂದಲ

ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಗೊಂದಲ

ಚುನಾವಣೆ ಮುಂದೂಡಿಕೆ

ಹರಪನಹಳ್ಳಿ, ಆ.2- ಮಾಡಿದ ಮತದಾನದಲ್ಲಿ ಗೊಂದಲ ಉಂಟಾಗಿ ಅಧ್ಯಕ್ಷ – ಉಪಾದ್ಯಕ್ಷರ ಚುನಾವಣೆ ಯನ್ನು ಮುಂದೂಡಿದ ಘಟನೆ ತಾಲ್ಲೂ ಕಿನ ತೊಗರಿಕಟ್ಟಿ ಗ್ರಾಮ ಪಂಚಾಯಿತಿ ಯಲ್ಲಿ ಬುಧವಾರ ಜರುಗಿತು.

ಈ ಕುರಿತು ಮಾಹಿತಿ ನೀಡಿದ ಚುನಾವಣಾಧಿಕಾರಿ ಪ್ರಸನ್ನರವರು ಅಧ್ಯಕ್ಷ ಸ್ಥಾನಕ್ಕೆ, ಸರಿತಾಬಾಯಿ ಹಾಗೂ ಕೆಂಚವ್ವ ನಾಮಪತ್ರ ಸಲ್ಲಿಸಿ ದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಣಕಾರ ಹನುಮಕ್ಕ ಹಾಗೂ ತಾವರಗೊಂದಿ ಶ್ರೀಕಾಂತ ನಾಮಪತ್ರ ಸಲ್ಲಿಸಿದ್ದರು.

ಮತ ಎಣಿಕೆ ನಂತರ ಮತ ಪತ್ರದಲ್ಲಿ ಎರಡು ಬಾರಿ ಸ್ವಸ್ತಿಕ ಚಿಹ್ನೆಯನ್ನು ಒಬ್ಬರ ಹೆಸರಿನ ಮುಂದೆ ಒತ್ತಿದ್ದರಿಂದ ನಾನು ಆ ಮತಪತ್ರವನ್ನು ತಿರಸ್ಕಾರ ಮಾಡಿದ್ದೆ, ಇಂತವರಿಗೆ ಇಷ್ಟಿಷ್ಟು ಮತಗಳು ಬಂದಿವೆ ಎಂದು ತಿಳಿಸಿದ್ದೆ, ಆದರೆ ಫಲಿತಾಂಶ ಘೋಷಣೆ ಮಾಡಿರಲಿಲ್ಲ, ಠರಾವು ಆಗಿರಲಿಲ್ಲ. ಈ ಸಂದರ್ಭದಲ್ಲಿ ಎರಡೂ ಕಡೆಯವರಿಂದ ಆಕ್ಷೇಪ, ಗೊಂದಲ ಉಂಟಾಯಿತು. ನಂತರ ಕೂಲಂಕುಷವಾಗಿ ಪರಿಶೀಲನೆ ಮಾಡಿ ಚುನಾವಣೆಯನ್ನು ಆ.7ಕ್ಕೆ ಮುಂದೂಡಲಾಯಿತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಎದುರು ಜನರು ಜಮಾಯಿಸಿದ್ದು, ಸ್ವಲ್ಪ ಬಿಗುವಿನ ವಾತಾವರಣ ಕಂಡು ಬಂದಿತ್ತು. ಸಿಪಿಐ ನಾಗರಾಜ ಎಂ. ಕಮ್ಮಾರ ನೇತೃತ್ವದಲ್ಲಿ ಇಬ್ಬರು ಪಿಎಸ್‍ಐಗಳು ಬಂದೋಬಸ್ತ್ ಕಲ್ಪಿಸಿದ್ದರು.

error: Content is protected !!