ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ಗೆ ಸಾಣೇಹಳ್ಳಿ ಶ್ರೀಗಳಿಂದ ಆಶೀರ್ವಾದ

ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ಗೆ ಸಾಣೇಹಳ್ಳಿ ಶ್ರೀಗಳಿಂದ ಆಶೀರ್ವಾದ

ಸಾಣೇಹಳ್ಳಿ, ಜು.10- ಇಲ್ಲಿನ ಶ್ರೀ ಮಠಕ್ಕೆ ಗಣಿ‌ ಮತ್ತು ಭೂವಿಜ್ಞಾನ ಹಾಗೂ ತೋಟ ಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳನ್ನು ಇಂದು ಭೇಟಿ ಮಾಡಿ ಆಶೀರ್ವಾದ ಪಡೆದರು. 

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗ್ರಾಮಸ್ಥರು ರಾಗಿಯ ಹಣ ರೈತರಿಗೆ ಇನ್ನೂ ಬಾರದಿರುವ ಬಗ್ಗೆ, ತೆಂಗಿನ ಬೆಲೆ ಕುಸಿದಿರುವ ಬಗ್ಗೆ, ಶ್ರೀಗಂಧ ಬೆಳೆ ಕಟಾವಿಗೆ ಅನುಮತಿಯ ಬಗ್ಗೆ, ತೆಂಗಿಗೆ ತಗುಲಿರುವ ರೋಗದ ಬಗ್ಗೆ, ಭದ್ರಾ ಮೇಲ್ದಂಡೆ ಯೋಜನೆಯನ್ನು ತೀವ್ರಗೊಳಿಸುವ ಬಗ್ಗೆ ಸೇರಿದಂತೆ, ಅನೇಕ ಸಮಸ್ಯೆಗಳ ಬಗ್ಗೆ ಸಮಾಲೋಚಿಸಿದರು. ಇವುಗಳನ್ನು ಗಮನದಲ್ಲಿಟ್ಟುಕೊಂಡು ಸದನದಲ್ಲಿ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದರು. ಪಂಡಿತಾರಾಧ್ಯ ಶ್ರೀಗಳು, ಜನ ಮೆಚ್ಚುವ ರೀತಿಯಲ್ಲಿ  ಆಡಳಿತ ನೀಡುವಂತೆ  ಮಾರ್ಗದರ್ಶನ ನೀಡಿದರು.

error: Content is protected !!