ವಿದ್ಯುತ್ ದರ ಹೆಚ್ಚಳ ; ರಾಣೇಬೆನ್ನೂರು ವರ್ತಕರ ಪ್ರತಿಭಟನೆ

ವಿದ್ಯುತ್ ದರ ಹೆಚ್ಚಳ ; ರಾಣೇಬೆನ್ನೂರು ವರ್ತಕರ ಪ್ರತಿಭಟನೆ

ರಾಣೇಬೆನ್ನೂರು, ಜೂ. 23-  ವಿದ್ಯುತ್ ದರ ಹೆಚ್ಚಿಸಿರುವುದನ್ನು ವಿರೋಧಿಸಿ ಹುಬ್ಬಳ್ಳಿ ವಾಣಿಜ್ಯ ಸಂಸ್ಥೆಯ ಕರೆಯ ಮೇರೆಗೆ ಇಲ್ಲಿನ ವರ್ತಕ ಸಂಘದವರು ಪ್ರತಿಭಟನೆ ನಡೆಸಿ, ಶಾಸಕ ಪ್ರಕಾಶ ಕೋಳಿವಾಡ ಅವರಿಗೆ, ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವರ್ತಕ ಸಂಘದ ಅದ್ಯಕ್ಷ ಜಿ.ಜಿ.ಹೊಟ್ಟಿಗೌಡ್ರ, ಮುಖಂಡರಾದ ಸದಾನಂದ ಉಪ್ಪಿನ, ವಿ.ಪಿ. ಲಿಂಗನಗೌಡ, ಮಲ್ಲಿಕಾರ್ಜುನ ಅರಳಿ, ಶಂಕರಗೌಡ ಮಾಳಗಿ,  ಪ್ರಕಾಶ ಜಂಬಗಿ, ಕುಮಾರ ಜಂಬಗಿ, ಸುಜಿತ ಜಂಬಗಿ ಕಾಟನ್ ಮಾರ್ಕೆಟ್, ನೆಹರು ಮಾರ್ಕೆಟ,ಜವಳಿ, ಕಿರಾಣಿ ವರ್ತಕರು ಇನ್ನಿತರರು ಭಾಗವಹಿಸಿದ್ದರು.

error: Content is protected !!