ರಾಣೇಬೆನ್ನೂರು, ಜೂ. 23- ವಿದ್ಯುತ್ ದರ ಹೆಚ್ಚಿಸಿರುವುದನ್ನು ವಿರೋಧಿಸಿ ಹುಬ್ಬಳ್ಳಿ ವಾಣಿಜ್ಯ ಸಂಸ್ಥೆಯ ಕರೆಯ ಮೇರೆಗೆ ಇಲ್ಲಿನ ವರ್ತಕ ಸಂಘದವರು ಪ್ರತಿಭಟನೆ ನಡೆಸಿ, ಶಾಸಕ ಪ್ರಕಾಶ ಕೋಳಿವಾಡ ಅವರಿಗೆ, ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ವರ್ತಕ ಸಂಘದ ಅದ್ಯಕ್ಷ ಜಿ.ಜಿ.ಹೊಟ್ಟಿಗೌಡ್ರ, ಮುಖಂಡರಾದ ಸದಾನಂದ ಉಪ್ಪಿನ, ವಿ.ಪಿ. ಲಿಂಗನಗೌಡ, ಮಲ್ಲಿಕಾರ್ಜುನ ಅರಳಿ, ಶಂಕರಗೌಡ ಮಾಳಗಿ, ಪ್ರಕಾಶ ಜಂಬಗಿ, ಕುಮಾರ ಜಂಬಗಿ, ಸುಜಿತ ಜಂಬಗಿ ಕಾಟನ್ ಮಾರ್ಕೆಟ್, ನೆಹರು ಮಾರ್ಕೆಟ,ಜವಳಿ, ಕಿರಾಣಿ ವರ್ತಕರು ಇನ್ನಿತರರು ಭಾಗವಹಿಸಿದ್ದರು.
ವಿದ್ಯುತ್ ದರ ಹೆಚ್ಚಳ ; ರಾಣೇಬೆನ್ನೂರು ವರ್ತಕರ ಪ್ರತಿಭಟನೆ
![23 rnr 24.06.2023 ವಿದ್ಯುತ್ ದರ ಹೆಚ್ಚಳ ; ರಾಣೇಬೆನ್ನೂರು ವರ್ತಕರ ಪ್ರತಿಭಟನೆ](https://janathavani.com/wp-content/uploads/2023/06/23-rnr-24.06.2023-860x482.jpg)