‘ಬನ್ನಿ ನಾವು ಪರಿಸರ ಉಳಿಸೋಣ’ ಕೊಲ್ಯಾಜ್ ಬಿಡುಗಡೆ

‘ಬನ್ನಿ ನಾವು  ಪರಿಸರ ಉಳಿಸೋಣ’ ಕೊಲ್ಯಾಜ್ ಬಿಡುಗಡೆ

ಹರಿಹರ, ಜೂ. 6 – ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುದ್ರೋಣಾಚಾರ್ಯ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಚಿತ್ರಕಲಾವಿದ ಡಾ|| ಜಿ.ಜೆ.ಮೆಹೆಂದಳೆ ಅವರು ‘ಬನ್ನಿ ನಾವು ಪರಿಸರ ಉಳಿಸೋಣ’ ಎಂಬ ಕೊಲ್ಯಾಜ್ ಚಿತ್ರ ಬಿಡುಗಡೆ ಮಾಡಿದರು.

ಶಾಲಾ ಗೋಡೆಗಳ ಮೇಲೆ ಪರಿಸರ ಜಾಗೃತಿಯ ಚಿತ್ರಗಳನ್ನು ಬಿಡಿಸುವುದರಿಂದ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಮೆಹೆಂದಳೆ ತಿಳಿಸಿದ್ದಾರೆ.

ಚಿತ್ರ ಬಿಡುಗಡೆ ಸಂದರ್ಭದಲ್ಲಿ ಧನ್ಯೋಸ್ಮೀ ಭರತ ಭೂಮಿ ಸಂಘಟನೆಯ ಅಧ್ಯಕ್ಷ ಚರಣ ಅಂಗಡಿ, ಪತ್ರಕರ್ತ, ಹಿರಿಯ ವೈದ್ಯ ಜಯಪ್ರಕಾಶ್ ಶೆಟ್ಟಿ, ಅರ್ಕಾಚಾರಿ, ಮಹೇಶ ಕೂಲಿ, ಕಲ್ಲೇಶ, ಚಂದ್ರು ಕಮ್ಮಾರ್, ಮಧು ಬಿ.ಸಿ., ಹರ್ಷ, ವಿಜಯ ಉದಗಟ್ಟಿ, ಮಲ್ಲೇಶ ನೆಗಳೂರ, ಮಹೇಶ ಗೋಣೆಪ್ಪನವರ, ಸಚಿನ್ ಸೋಲಂಕಿ, ದುರ್ಗೋಜಿ, ಚನ್ನಬಸಯ್ಯ ಹಿರೇಮಠ, ಶಾಂತಲಾ, ಮಾನಸ ಉಪಸ್ಥಿತರಿದ್ದರು.

error: Content is protected !!