101 ತೆಂಗಿನಕಾಯಿ ಒಡೆದ ಸಿದ್ಧರಾಮಯ್ಯ ಅಭಿಮಾನಿ

101 ತೆಂಗಿನಕಾಯಿ ಒಡೆದ ಸಿದ್ಧರಾಮಯ್ಯ ಅಭಿಮಾನಿ

ಮಲೇಬೆನ್ನೂರು, ಮೇ 19- ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪುನಃ ಮುಖ್ಯಮಂತ್ರಿಯಾದರೆ ಮಲೇಬೆನ್ನೂರಿನ ಆರಾಧ್ಯ ದೈವ ಶ್ರೀ ಬಸವೇಶ್ವರ ದೇವರಿಗೆ 101 ತೆಂಗಿನಕಾಯಿ ಒಡೆಯುವುದಾಗಿ ಹರಕೆ ಹೊತ್ತಿದ್ದ ಗ್ರಾ.ಪಂ. ಮಾಜಿ ಅಧ್ಯಕ್ಷ ಭೋವಿ ಕುಮಾರ್ ಮತ್ತು  ಪುರಸಭೆ ಸದಸ್ಯೆ ಶ್ರೀಮತಿ ಮಂಜುಳಾ ಭೋವಿಕುಮಾರ್ ದಂಪತಿ ಶುಕ್ರವಾರ ಹರಕೆ ಸಮರ್ಪಿಸಿದರು.

ಶ್ರೀ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಅವರ ನೇತೃತ್ವದಲ್ಲಿ ಭೋವಿಕುಮಾರ್ ಮತ್ತು ಶ್ರೀಮಂಜುಳಾ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು, ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಸಿದ್ಧರಾಮಯ್ಯ ಅವರಿಗೆ ಶಕ್ತಿ ನೀಡುವಂತೆ ಪ್ರಾರ್ಥಿಸಿದರು.

ಇದಕ್ಕೂ ಮುನ್ನ ಇಲ್ಲಿನ ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಅವರ ದರ್ಗಾದಲ್ಲೂ ಚಾದರ ಹೊದಿಸಿ ಓದಿಕೆ ಮಾಡಿಸಲಾಯಿತು.

ನಂತರ ಮುಖ್ಯ ವೃತ್ತದಲ್ಲಿ ಸಿದ್ಧರಾಮಯ್ಯ ಅವರ ಕಟೌಟ್ ಸಮ್ಮುಖದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಾಚರಣೆ ಆಚರಿಸಲಾಯಿತು.

 ಸೈಯದ್ ಜಾಕೀರ್, ಪುರಸಭೆ ಸದಸ್ಯರಾದ ಸಾಬೀರ್ ಅಲಿ, ನಯಾಜ್, ಷಾ ಅಬ್ರಾರ್, ಕೆ.ಜಿ. ಲೋಕೇಶ್, ಖಲೀಲ್, ಭೋವಿ ಶಿವು, ಶಬ್ಬೀರ್ ಖಾನ್, ದಾದಾಪೀರ್, ಎಂ.ಬಿ. ರುಸ್ತುಂ, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್. ಶಿವಕುಮಾರ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸು, ಪಿಎಸಿಎಸ್ ಮಾಜಿ ಅಧ್ಯಕ್ಷ ಪಿ.ಆರ್. ಕುಮಾರ್, ತಾ.ಪಂ. ಮಾಜಿ ಅಧ್ಯಕ್ಷ ಆದಾಪುರ ವೀರಭದ್ರಪ್ಪ, ಎಳೆಹೊಳೆ ಕುಮಾರ್, ಪೂಜಾರ್ ದೇವರಾಜ್, ಪಿ.ಬಿ. ಬೀರಪ್ಪ, ಪಿ.ಹೆಚ್. ಹಾಲೇಶ್, ಪೂಜಾರ್ ನಾರಾಯಣಪ್ಪ, ಪೂಜಾರ್ ಮಹೇಶ್, ಗಿರೀಶ್, ಪಿ.ಜೆ. ಗಂಗಾಧರ್, ಮಡಿವಾಳರ ರಾಜು, ಬುರಾನ್, ಮೈದೂರು ಹಿದಾಯಿತ್, ಗೋಣಿಗೆರೆ ದಾದಾಪೀರ್, ಕಣ್ಣಾಳ್ ನಾಗರಾಜ್, ಸರ್ಫರಾಜ್, ಹುಳ್ಳಿ ಪ್ರಭು, ಎಸ್. ಬೀರೇಶ್, ಷಾಬಾಜ್ ಅಲಿ, ದೊಡ್ಮನಿ ಬಸವರಾಜ್ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

error: Content is protected !!