ಹರಿಹರ ನಗರಸಭೆ ವತಿಯಿಂದ ಮತಗಟ್ಟೆ ಜಾಥಾ

ಹರಿಹರ ನಗರಸಭೆ ವತಿಯಿಂದ ಮತಗಟ್ಟೆ ಜಾಥಾ

ಹರಿಹರ, ಮೇ 1 – ನಮ್ಮ ನಡೆ ಮತಗಟ್ಟೆ ಕಡೆಗೆ ಎಂಬ ಧ್ಯೇಯದೊಂದಿಗೆ ಮತದಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ನಗರದ ನಗರಸಭೆಯ ವತಿಯಿಂದ ಜಾಥಾ ನಡೆಸಲಾಯಿತು.

ನಗರದ ಬಿಇಓ ಕಚೇರಿಯ ಮುಂಭಾಗದಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಹಾಗೂ ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್ ಧ್ವಜಾರೋಹಣ ಮಾಡಿ ಜಾಥಾಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ತಹಶೀಲ್ದಾರ್ ಪೃಥ್ವಿ ಸಾನಿಕಂ, ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ರಂಗವು ಸುಭದ್ರ ತಳಹದಿಯ ಮೇಲೆ ನಡೆಯುವುದಕ್ಕೆ  ಪ್ರತಿಯೊಬ್ಬ ನಾಗರಿಕರು ತಮ್ಮ ಹಕ್ಕನ್ನು ಚಲಾಯಿಸಲು ಮುಂದಾಗಬೇಕಾಗಿದೆ ಎಂದರು. ಈ ವೇಳೆ ಹೊಸ ಮತದಾರರು ಹಾಗೂ ಹಿರಿಯ ಮತದಾರರನ್ನು ಸನ್ಮಾನಿಸಲಾಯಿತು.

 ಚುನಾವಣೆ ಅಧಿಕಾರಿ ಉದಯ್ ಕುಮಾರ್ ಕುಂಬಾರ ಪೌರಾಯುಕ್ತ ಐಗೂರು ಬಸವರಾಜ್, ತಾಪಂ ಇಓ ರವಿ, ಬಿಇಓ ಹನುಮಂತಪ್ಪ, ತೋಟ ಗಾರಿಕೆ ಇಲಾಖೆ ರೇಖಾ, ಸಿಡಿಪಿಓ ಪೂರ್ಣಿಮಾ, ನಗರಸಭೆ ಎಇಇ ವಿನಯ್ ಕುಮಾರ್, ಆರ್.‌ಓ. ಮಂಜುನಾಥ್, ಆರೋಗ್ಯ ಇಲಾಖೆ ಗುರುಪ್ರಸಾದ್, ರವಿಪ್ರಕಾಶ್, ಜಿ.ಕೆ. ಪ್ರಮೀಣ್,  ತಾ.ಪಂ ಇಲಾಖೆ ಪೂಜಾ, ಗಾಯತ್ರಿ, ವೀಣಾ, ಬಸವರಾಜಯ್ಯ, ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.

error: Content is protected !!