ಹಳೇಪೇಟೆ ವೀರಭದ್ರೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ ಭೂಮಿ ಪೂಜೆ

ಹಳೇಪೇಟೆ ವೀರಭದ್ರೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ ಭೂಮಿ ಪೂಜೆ

ದಾವಣಗೆರೆ, ಮಾ. 6 – ನಗರದ ಹಳೇಪೇಟೆ ಯಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಶ್ರೀ ಕುದುರೆ ಮಹಾಲಿಂಗಪ್ಪ ಕಲ್ಯಾಣ ಮಂಟಪವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸಮುದಾಯ ಭವನ ಪುನರ್‌ ನಿರ್ಮಾಣಕ್ಕೆ ಭೂಮಿ ಪೂಜಾ ಸಮಾರಂಭವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಿನ್ನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮೇಯರ್‌ ವಿನಾಯಕ ಪೈಲ್ವಾನ್‌, ಮಹಾನಗರ ಪಾಲಿಕೆ ಸದಸ್ಯರಾದ ಎ. ನಾಗರಾಜ್, ಶ್ರೀಮತಿ ಸುಧಾ ಇಟ್ಟಿಗುಡಿ ಮಂಜುನಾಥ್‌, ಮಹಾನಗರ ಪಾಲಿಕೆ ಮಾಜಿ ಸದಸ್ಯ ದಿನೇಶ್‌ ಕೆ. ಶೆಟ್ಟಿ, ಗೌಡ್ರು ಚನ್ನಬಸಪ್ಪ, ಕುದುರೆಿ ಕರಿಬಸಪ್ಪ, ಹರಿಹರದ ಕರಿಬಸಪ್ಪ, ಕುದುರೆ ವಿಶ್ವನಾಥ್‌, ಎಂ.ಕೆ. ಬಕ್ಕಪ್ಪ, ಕಿರುವಾಡಿ ಸೋಮಶೇಖರ್, ಮಲ್ಲಾಬಾದಿ ಗುರುಬಸವರಾಜ್‌, ಕೋಡಬಾಳ್‌ ಚನ್ನಬಸಪ್ಪ ಮೆರವಣಿಗೆ ನಿರಂಜನ, ಮೆರವಣಿಗೆ ಜಯವಿಭವ, ಎನ್.ಕೆ. ಕೊಟ್ರೇಶ್‌, ಆರ್. ವಿ. ಕೊಟ್ರೇಶ್‌, ಸುರೇಶಪ್ಪ ಹರವಿ ಮತ್ತು ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

error: Content is protected !!