ಶಾಸಕರಾಗಿ ಪ್ರಕಾಶ ಕೋಳಿವಾಡ ಆಯ್ಕೆ

ಶಾಸಕರಾಗಿ ಪ್ರಕಾಶ ಕೋಳಿವಾಡ ಆಯ್ಕೆ

ರಾಣೇಬೆನ್ನೂರಿನಲ್ಲಿ ಬೆಂಬಲಿಗರಿಂದ ವಿಜಯೋತ್ಸವ

ರಾಣೇಬೆನ್ನೂರು, ಮೇ 14- ಸ್ಥಳೀಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಕಾಶ ಕೋಳಿವಾಡ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಪರಸ್ಪರ ಬಣ್ಣ ಹಚ್ಚಿಕೊಂಡು ಪಟಾಕಿ ಸಿಡಿಸಿ ನಗರದಲ್ಲಿ ವಿಜಯೋತ್ಸವ ಆಚರಿಸಿದರು. 

ಚುನಾವಣೆಯಲ್ಲಿ ವಿಜಯಶಾಲಿಯಾಗಿ ಹಾವೇರಿಯಿಂದ ನಗರಕ್ಕೆ ಆಗಮಿಸಿದ ಪ್ರಕಾಶ ಕೋಳಿವಾಡ ಅವರಿಗೆ ಇಲ್ಲಿನ ಸಿದ್ಧೇಶ್ವರ ನಗರದ ಸಿದ್ಧೇಶ್ವರ ದೇವಸ್ಥಾನದ ಬಳಿ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದರು.

ನಂತರ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿದ ಪ್ರಕಾಶ ಕೋಳಿವಾಡ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರತ್ತ ಕೈ ಬೀಸುತ್ತಾ ಧನ್ಯವಾದಗಳನ್ನು ಸಲ್ಲಿಸಿದರು. ದಾರಿಯುದ್ದಕ್ಕೂ ಅಭಿಮಾನಿಗಳು ಕಾಂಗ್ರೆಸ್ ಪಕ್ಷ ಹಾಗೂ ಕೋಳಿವಾಡರ ಪರ ಘೋಷಣೆಗಳನ್ನು ಕೂಗಿದರು.  

ನಗರ ಘಟಕದ ಅಧ್ಯಕ್ಷ ಶೇರು ಕಾಬೂಲಿ, ಗ್ರಾಮೀಣ ಘಟಕದ ಅಧ್ಯಕ್ಷ ಮಂಜನಗೌಡ ಪಾಟೀಲ, ಪುಟ್ಟಪ್ಪ ಮರಿಯಮ್ಮನವರ, ಕೃಷ್ಣಪ್ಪ ಕಂಬಳಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಬಾರ್ಕಿ, ಏಕನಾಥ ಭಾನುವಳ್ಳಿ, ಸಣ್ಣತಮ್ಮಪ್ಪ ಬಾರ್ಕಿ, ಮೃತ್ಯುಂಜಯ ಗುದಿಗೇರ, ಬಸವರಾಜ ಹುಚಗೊಂಡರ, ಶ್ರೀನಿವಾಸ ಸಾವಕಾರ, ರವೀಂದ್ರಗೌಡ ಪಾಟೀಲ, ಶರೀನ್‍ತಾಜ್ ಶೇಖ್‌, ವೆಂಕಟೇಶ ಬಣಕಾರ ಸೇರಿದಂತೆ ಸಹಸ್ರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

error: Content is protected !!