ಹರಪನಹಳ್ಳಿಯ ನಿವೃತ್ತ ಉಪನ್ಯಾಸಕ ವಿ. ತುಂಬಣ್ಣ ಅವರಿಗೆ ಸನ್ಮಾನ

ಹರಪನಹಳ್ಳಿ, ಜು.14- ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ವಿ. ತುಂಬಣ್ಣ ವಯೋನಿವೃತ್ತಿಯಾಗಿದ್ದು, ಸಿಬ್ಬಂದಿಗಳು ಮತ್ತು ಕಾಲೇಜು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.

ಪ್ರಾಂಶುಪಾಲ ಎ. ಪ್ರಸಾದ್ ಶಾಸ್ತ್ರಿ ಮಾತನಾಡಿ, ತುಂಬಣ್ಣ ಸರಳ ಜೀವಿಗಳಾಗಿದ್ದು, ಪುಸ್ತಕ ಹಾಗೂ ವಿದ್ಯಾರ್ಥಿಗಳನ್ನು ಹೆಚ್ಚು ಪ್ರೀತಿಸು ತ್ತಿದ್ದರು. ರಾಜ್ಯಶಾಸ್ತ್ರ ವಿಷಯದಲ್ಲಿ ಅಪಾರ ಪಾಂಡಿತ್ಯ ಉಳ್ಳವರಾಗಿದ್ದು, ಉತ್ತಮ ಭಾಷಣಕಾರರು, ಉಪನ್ಯಾಸಕ ವೃತ್ತಿಯ ಜೊತೆಗೆ ಗ್ರಂಥಪಾಲಕ ಹುದ್ದೆಯನ್ನೂ ನಿಭಾಯಿಸಿದ್ದಾರೆ ಎಂದು ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಕಿರಣ್ ಶಾನಭೋಗ, ಉಪನ್ಯಾಸಕರಾದ ನಾರಾಯಣಸ್ವಾಮಿ, ವೀರಣ್ಣ, ವೆಂಕಟೇಶ್, ನಿಂಗಜ್ಜರ ಬಣಕಾರ್, ರಮ್ಯ, ಪ್ರಥಮ ದರ್ಜೆ ಸಹಾಯಕರಾದ ಕೆಂಚರಾಜ್, ಶಿವರಾಜ್, ದ್ವಿತೀಯ ದರ್ಜೆ ಸಹಾಯಕಿ ಸೀಮಾ ಸೇರಿದಂತೆ ಸಿಬ್ಬಂದಿ ಮಂಜುನಾಥ್ ಉಪಸ್ಥಿತರಿದ್ದರು.

error: Content is protected !!