ಕೋವಿಡ್ -19 ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ರವೀಂದ್ರನಾಥ್ ಚಾಲನೆ

ದಾವಣಗೆರೆ, ಏ.18- ನಗರದ 32ನೇ ವಾರ್ಡ್ ಸರಸ್ವತಿ ಬಡಾವಣೆಯಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು, ಮಾಜಿ ಸಚಿವರೂ ಆದ ಎಸ್.ಎ. ರವೀಂದ್ರನಾಥ್‍ ಕೋವಿಡ್ -19 ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಕಾರ್ಯಕ್ರಮ ಉದ್ಘಾಟಿಸಿದರು. ನಗರದ  ಪ್ರಾಥಮಿಕ ಆರೋಗ್ಯ ಕೇಂದ್ರ, ನಿಟುವಳ್ಳಿ ಮತ್ತು ಶ್ರೀ ಬನ್ನಿಮಹಾಂಕಾಳಿ ಸೇವಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಕೋವಿಡ್ 19ರ ಲಸಿಕಾ ಅಭಿಯಾನವನ್ನು ಕೆ.ಎಸ್.ಎಸ್. ಕಾಲೇಜು ಆವರಣ, ಬೀರೇಶ್ವರ ನಗರ, ಸರಸ್ವತಿ ನಗರ ವಾರ್ಡ್ ನಂ.33ರಲ್ಲಿ  ಲಸಿಕೆ ನೀಡಲಾಯಿತು. 

ಈ ಸಂದರ್ಭದಲ್ಲಿ  ಶ್ರೀ ಬನ್ನಿ ಮಹಾಂಕಾಳಿ ಸೇವಾ ಸಮಿತಿ ಅಧ್ಯಕ್ಷ
ಪ್ರೊ. ಬಾಗೂರು ಆನಂದಪ್ಪ, ಸಮಿತಿಯ ಪದಾಧಿಕಾರಿಗಳಾದ ಸಂತೇಬೆನ್ನೂರು ಸಿದ್ಧಪ್ಪ, ಶ್ರೀಮತಿ ಮಂಗಳಮ್ಮ, ಡಾ. ವೀರ ಜ್ಞಾನೇಶ್ವರಿ ಮತ್ತಿತರರು ಲಸಿಕಾ ಅಭಿಯಾನದಲ್ಲಿ ಭಾಗವಹಿಸಿದ್ದರು.

error: Content is protected !!