ಬಲ್ಲೂರು : ಸ್ಮಶಾನದ ಜಾಗ ನೀಡಲು ಮನವಿ

ದಾವಣಗೆರೆ, ಏ.16- ತಾಲ್ಲೂಕಿನ ಬಲ್ಲೂರು ಗ್ರಾಮಕ್ಕೆ ಸ್ಮಶಾನದ ಜಾಗ ನೀಡು ವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲ್ಲೂಕಿನ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ 200 ಮನೆಗಳಿದ್ದು, ಜನಸಂಖ್ಯೆ ಸಾವಿರ ಇದ್ದು, ಜಮೀನು ಇಲ್ಲದವರು ಮರಣ ಹೊಂದಿದರೆ ಶವಗಳನ್ನು ಹೂಳಲು ಜಾಗವಿಲ್ಲ. ಈ ಹಿಂದೆ ಇದ್ದ ಜಾಗ ದೇವರಬೆಳಕೆರೆ ಪಿಕಪ್ ಗೆ ಮುಳುಗಡೆಯಾಗಿದ್ದು, ಶವ ಹೂಳಲು ಜಾಗವಿಲ್ಲದ ಕಾರಣ, ಸರ್ಕಾರ ಕೂಡಲೇ ಸ್ಮಶಾನದ ಜಾಗ ನೀಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಲ್ಲೂರು ರವಿಕುಮಾರ್, ಹೆಚ್.ಎಂ. ಸುರೇಶ್, ಬಿ.ಎಂ. ಬಸವರಾ ಜಯ್ಯ, ಕೆ. ವಿರುಪಾಕ್ಷಪ್ಪ, ಹೆಚ್. ಪ್ರಕಾಶ್, ಸುನೀಲ್, ಬಸಪ್ಪ, ಬಿ.ಎಂ. ಶಿವಮೂರ್ತಯ್ಯ, ಎಂ. ಪರಶುರಾಮ್, ಬಿ.ಎಂ. ಚನ್ನೇಶ್ ಸೇರಿದಂತೆ ಇತ್ತರರಿದ್ದರು.

error: Content is protected !!