ವಿಠ್ಠಲ ರುಖುಮಾಯಿ ರಥೋತ್ಸವ

ಹೊನ್ನಾಳಿ, ಫೆ.13-  ದೊಡ್ಡಪೇಟೆ ವಿಠ್ಠಲ ರುಖುಮಾಯಿ 104 ನೇ ದಿಂಡಿ ಉತ್ಸವದ ರಥೋತ್ಸವ ಭಾನುವಾರ ನಡೆಯಿತು. ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ನಾಗರಾಜ್ ಮೂಳೆಕರ್,ಉಪಾಧ್ಯಕ್ಷ ಜಗನ್ನಾಥ್ ರಾವ್, ಪ್ರಧಾನ ಕಾ.ವಿಠ್ಠಲರಾವ್ ಹೊವಳೆ, ಸಹ ಕಾ.ನಾಮದೇವ ಹೊವಳೆ ಮತ್ತು ವಿನಾಯಕ ಖಟಾವ್‌ಕರ್, ಖಜಾಂಚಿ ಆನಂದರಾವ್ ಹೊವಳೆ, ಸಹ ಖಜಾಂಚಿ ಗಣಪತಿ ಹೊವಳೆ, ನಿರ್ದೇಶಕರುಗಳಾದ ಜಗನ್ನಾಥ್ ಪಾಟಣಕರ್, ಹಾಲೇಶಪ್ಪ, ಮಂಜುನಾಥ್, ವಿಜಯಕುಮಾರ್, ಪ್ರಶಾಂತ್, ಶ್ರೀನಿವಾಸ, ಸಂಚಾಲಕ ಗೋಪಾಲಕೃಷ್ಣ ಹಾಗು ಇತರರು ಉಪಸ್ಥಿತರಿದ್ದರು.

error: Content is protected !!