ಹೊನ್ನಾಳಿ ಎಪಿಎಂಸಿ ಅಧ್ಯಕ್ಷರಾಗಿ ಭೈರನಹಳ್ಳಿ ರಾಜು

ಹೊನ್ನಾಳಿ, ಡಿ. 17- ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ  ಸಮಿತಿಯ  ಅಧ್ಯಕ್ಷರಾಗಿ ಸಾಸ್ವೆಹಳ್ಳಿಯ ಬೈರನಹಳ್ಳಿ ಜಿವಿಎಂ ರಾಜು ಅವಿರೋಧವಾಗಿ  ಆಯ್ಕೆ ಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಯಾಗಿದ್ದ ತಹಶೀಲ್ದಾರ್ ಬಸನಗೌಡ ಕೋಟೂರ ತಿಳಿಸಿದ್ದಾರೆ. 

ಜಿ.ಎಸ್‍. ಸುರೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ  ಇಂದು ಚುನಾವಣೆ ನಿಗದಿಯಾಗಿತ್ತು,   ರಾಜು  ಅವರೊಬ್ಬರೇ  ನಾಮಪತ್ರ ಸಲ್ಲಿಸಿದ್ದರು. 16 ಸದಸ್ಯರ ಸಮಿತಿಯಲ್ಲಿ 9 ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದು 7 ಸದಸ್ಯರು ಗೈರು ಆಗಿರುವುದಾಗಿ ತಹಶೀಲ್ದಾರ್ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿಯ ತಾಲ್ಲೂಕು ಅಧ್ಯಕ್ಷ ಸುರೇಶ್, ಮುಖಂಡ ಎಂ.ಪಿ.ರಮೇಶ್. ಶಾಂತರಾಜ್ ಬಲಮುರಿ, ಎಂಪಿಎಂಸಿ ಮಾಜಿ ಅಧ್ಯಕ್ಷ ಬೀರಪ್ಪ ಪ್ರಕಾಶ್,  ಕುಬೇಂದ್ರಪ್ಪ, ಕೃಷ್ಣನಾಯ್ಕ,    ಸೋಮಶೇಖರ್,  ನಾಮ ನಿರ್ದೇಶಿತ ಸದಸ್ಯರಾದ ಲತಾ, ಬಸವರಾಜ್ , ಶಿವಮೂರ್ತೆಪ್ಪ, ಬಿಜೆಪಿ ಮುಖಂಡರಾದ ಎ.ಬಿ ಹನುಮಂತಪ್ಪ, ಅರಕರೆ ನಾಗರಾಜ್, ನೆಲಹೊನ್ನೆ ಮಂಜು, ದೇವರಾಜ್ ಇನ್ನಿತರರಿದ್ದರು.

error: Content is protected !!