ಹೆಮ್ಮನಬೇತೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಭಾರತಿ

ದಾವಣಗೆರೆ,ಡಿ. 17- ತಾಲ್ಲೂಕಿನ ಹೆಮ್ಮನಬೇತೂರು ಗ್ರಾಮ ಪಂಚಾಯಿತಿಗೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಯು.ಜಿ. ಭಾರತಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಟಿ.ಆರ್. ಶಶಿಕಲಾ, ಗ್ರಾ.ಪಂ ಉಪಾಧ್ಯಕ್ಷ ಬಿ.ಓ. ಶಿವಕುಮಾರ್, ಸದಸ್ಯರು ಗಳಾದ ಕೆಂಚವೀರಪ್ಪ, ಅನಸೂಯಮ್ಮ ದ್ಯಾಮವ್ವ ನಹಳ್ಳಿ, ಕೋಮಲತಾ, ಎ.ಕೆ. ದುರುಗಪ್ಪ, ಜಿ.ಸಿ. ಗಿರೀಶ್, ರತ್ನಮ್ಮ, ಕೆ.ಜಿ. ಕುಸುಮ, ನೇತ್ರಾವತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು ಎಂದು ಪಿಡಿಓ ಎಲ್.ಎಸ್. ನಾಗರಾಜ್ ತಿಳಿಸಿದ್ದಾರೆ.

error: Content is protected !!