38ನೇ ವಾರ್ಡಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ

ದಾವಣಗೆರೆ,ಸೆ.22- ನಗರದ ಎಂ.ಸಿ.ಸಿ. `ಬಿ’ ಬ್ಲಾಕ್ ನಲ್ಲಿ 2018-19 ನೇ ಸಾಲಿನ ಅನುದಾನದಲ್ಲಿ 7.5 ಲಕ್ಷದ ಮೊತ್ತದ ಶುದ್ಧ ನೀರಿನ ಘಟಕಕ್ಕೆ ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್ ಹಾಗೂ ಗೌರಮ್ಮ ಗಿರೀಶ್ ಅವರುಗಳು ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ಶೋಭಾ ಪಲ್ಲಾಗಟ್ಟೆ, ಮಾಜಿ ಉಪ ಮಹಾಪೌರರಾದ ಗೌಡ್ರ ರಾಜಶೇಖರ್, ಪಾಲಿಕೆ ಮಾಜಿ ಸದಸ್ಯ ಜಿ. ಬಿ. ಲಿಂಗರಾಜ್, ಹಿರಿಯ ನಾಗರಿಕ ರಾದ ಪರಮೇಶ್ವರ ಗೌಡ್ರು, ಗೋಪಾಲ ಗೌಡ್ರು, ಜಾವೀ ದ್ ಸಾಬ್, ಗುರುಮೂರ್ತಿ, ಬಸವರಾಜಪ್ಪ, ಅಂದ ನೂರು ಮುಪ್ಪಣ್ಣ, ಅನಿಲ್ ಗೌಡ, ರವೀಂದ್ರನಾಥ್, ಪ್ರಮೋದ್ ಆಚಾರ್, ಆಲೂರು ಜ್ಯೋತಿರ್ಲಿಂಗ, ಬೆಳ್ಳೂಡಿ  ಉಮೇಶ್, ವಿವೇಕಾನಂದ ಕರಿಗೌಡ್ರು, ರಾಜು, ಅರ್.ಜಿ. ದಿನೇಶ್, ಗುತ್ತಿಗೆದಾರ ಪ್ರಕಾಶ್, ಕೆ. ಎಲ್. ಹರೀಶ್ ಬಸಾಪುರ ಮುಂತಾದವರು ಉಪಸ್ಥಿತರಿದ್ದರು.

error: Content is protected !!